ಸಂಡೂರು:21:ಏ:- ಪಟ್ಟಣ್ಣದಲ್ಲಿ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ಹಾಗೂ ಕಛೇರಿ ಉದ್ಘಾಟನೆ ಸಮಾರಂಭವನ್ನು ತಾಲೂಕಿನ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿತ್ತು, ನೌಕರರ ಅಧ್ಯಕ್ಷರು, ಗೌರವಾಧ್ಯಕ್ಷರು,ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷರು, ನಿರ್ದೇಶಕರು, ಶಿಕ್ಷಕರು ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೆ ಸಂಧರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರಾದ ಚೌಕಳಿ ಪರಶುರಾಮಪ್ಪ ತಾಲೂಕಿನ ಸರ್ಕಾರಿ ನೌಕರರಿಗೆ ಸರ್ಕಾರಿ ನೌಕರರ ದಿನಾಚರಣೆಯ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸುತ್ತ ಬಾಗವಹಿಸಿದ್ದ ನೌಕರರಿಗೆ ಸಿಹಿ ಹಂಚಿ, ದಿನಾಚರಣೆಯ ದಿನದ ನೆನಪಿಗಾಗಿ ಸಸಿನೆಟ್ಟು ನೌಕರರ ದಿನಾಚರಣೆಯನ್ನು ಆಚರಿಸಲಾಯಿತು. ಹಾಗೂ ಕಚೇರಿಯನ್ನು ಒದಗಿಸಿಕೊಟ್ಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಂಡೂರು ತಾಲೂಕಿನ ಸರ್ಕಾರಿ ನೌಕರರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಚೌಕಳಿ ಪರಶುರಾಮಪ್ಪ, ರಾಜ್ಯ ಪರಿಷತ್ ಸದಸ್ಯರಾದ ಈಶ್ವರಪ್ಪ,ಗೌರವಾಧ್ಯಕ್ಷರಾದ ಸಿದ್ದಣ್ಣ, ಉಪಾಧ್ಯಕ್ಷರಾದ ಪ್ರಕಾಶ್,ಭಜಂತ್ರಿ ಚಂದ್ರಶೇಖರ ಸ್ವಾಮಿ, ಸುಭಾಷ್, ಕೊಟ್ರೇಶ್ ಉಪಸ್ಥಿತರಿದ್ದರು