ಕೊಟ್ಟೂರು:26:-ತಾಲೂಕಿನ ಸುಂಕದಕಲ್ಲಿನ 70 ವರ್ಷದ ವiಹಿಳೆ ಮತ್ತು 19 ವರ್ಷದ ಯುವಕನ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದರ ಘಟನೆ ಸೋಮವಾರ ನೆಡೆದಿದೆ. ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ 70ವರ್ಷದ ಕೊರವರ ಬಸಮ್ಮ ಮತ್ತು 19 ವರ್ಷದ ದುರ್ಗೇಶ್ ಎಂದು ಗುರುತಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆಂದು ಜಗಳೂರು ಮತ್ತು ದಾವಣಗೆರೆ ಅಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ತಾಲೂಕಿನ ಉಜ್ಜಯಿನಿ ಗ್ರಾಮದ ಬಸಮ್ಮ ಕಸಬರಿಕೆ ತಯಾರಿಸಿ ಮಾರಾಟ ಮಾಡುವ ಉದ್ಯೋಗ ಮಾಡುತ್ತಿದ್ದ ಕಾರಣಕ್ಕಾಗಿ ಕಸಬರಿಕೆಯ ಹುಲ್ಲು ತರಲು ಸುಂಕದಲ್ಲು ಅರಣ್ಯ ಪ್ರದೇಶಕ್ಕೆ ಹೋಗಿದ್ದಳು ಆಗ ಚಿರತೆಯೊಂದು ಏಕಾಏಕಿ ಬಂದು ಮೇಲೆರೆಗಿ ದಾಳಿ ಮಾಡಿ ಮುಖವನ್ನು ಪರಿಚಿದೆ. ಅಲ್ಲದೇ ಕುರಿಗಾಯಿ ದುರ್ಗೇಶ ಎಂಬಾತ ಮೇಲೆಯೂ ದಾಳಿ ಮಾಡಿದೆ. ಈ ಇಬ್ಬರನ್ನು ಸಮೀಪದ ಉಜ್ಜಯಿನಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕಳಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ. ಗಾಯಾಳುಗಳಿಂದ ಪೂರ್ಣ ಮಾಹಿತಿ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ಅರಣ್ಯಾಧಿಕಾರಿ ಬಿ.ಎಸ್.ಮಂಜುನಾಥ ಹೇಳಿದರು.
ವರದಿ: ಶಿವರಾಜ್ ಗಡ್ಡಿ