ಬಡಮಕ್ಕಳಿಗಾಗಿ ಮತ್ತು ಅನಾಥ ಮಕ್ಕಳಿಗೆ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಪೀಠ, ಶ್ರೀ ದಿಗಂಬರ ರಾಜ ಭಾರತಿ ಸ್ವಾಮಿಗಳು ಇಂಗಳಗಿ ಗ್ರಾಮ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ 8, 9,10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಹಾಗೂ ವಸತಿ ಊಟವನ್ನು ನೀಡಲಾಗುವುದೆಂದು ವಿದ್ಯಾಪೀಠದ ಪೀಠಾಧಿಪತಿ ಶ್ರೀ ಯೋಗ ತಾತನವರು ಅವರು ತಿಳಿಸಿದ್ದಾರೆ.
ಇಂದಿನ ದಿನಮಾನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಶಿಕ್ಷಣ ಕಲಿಯುವುದಕ್ಕೆ ಈಗ ಖಾಸಗಿ ಶಾಲೆಗಳಲ್ಲಿ ದುಡ್ಡು ಕೊಟ್ಟು ಓದಿಸಲು ಆಗದ ಬಡ ವಿದ್ಯಾರ್ಥಿಗಳಿಗೆ, ಮತ್ತು ಅನಾಥ ಮಕ್ಕಳಿಗೆ ನಮ್ಮ ವಿದ್ಯಾಪೀಠ ದಿಂದ ನೂರಾರು ಜನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವಸತಿ ಊಟವನ್ನು ನೀಡಲಾಗುವುದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ, ಹೆಚ್ಚಿನ ಮಾಹಿತಿಗಾಗಿ 9663843125 ಸಂಪರ್ಕಿಸಿರಿ.