ಸಾರಿಗೆ ಬಸ್ ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು.

0
392

ಸಂಡೂರು:26:-ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಬಂಡ್ರಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ, 26ರಂದು ಮಧ್ಯ್ಹಾಹ್ನ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣ‍ಾಮ. ಬೈಕ್ ಸವಾರ ಮಡಿವಾಳರ ನಾಗರಾಜ(40)ನ ತಲೆಗೆ ಭಾರೀ ಪೆಟ್ಟಾಗಿದ್ದು, ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಬೈಕ್ ಸವಾರ ಮಡಿವಾಳರ ನಾಗರಾಜನು ಕೂಡ್ಲಿಗಿಯಲ್ಲಿರುವ, ತಮ್ಮ ಸಂಬಂಧಿಕರನ್ನು ಮಾತನಾಡಿಸಿ ಮರಳಿ ಸಂಡೂರಿಗೆ ತೆರಳುತ್ತಿದ್ದ.ಸಂಡೂರು ಕಡೆಯಿಂದ ಕೂಡ್ಲಿಗಿ ಕಡೆಗೆ ತೆರಳುತಿದ್ದ ಬಸ್ ನಡುವೆ,ಬಂಡ್ರಿ ಅರಣ್ಯ ಪ್ರದೇಶದಲ್ಲಿ ಮುಖಾಮುಕಿ ಡಿಕ್ಕಿ ಸಂಭವಿಸಿದೆ. ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕರಿಬ್ಬರೂ ಬಸ್ ನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಸಂಡೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here