-ಹುಳ್ಳಿಪ್ರಕಾಶ, ಹಿರಿಯಪತ್ರಕರ್ತರು
ಹಗರಿಬೊಮ್ಮನಹಳ್ಳಿ, ಆ,15
ಭಾರತದ 75ನೇ ಸ್ವಾತಂತ್ರ್ಯೋತ್ಸವದ ಈ ಶುಭಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದಲ್ಲಿ ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ) ವತಿಯಿಂದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಅತ್ಯಂತ ಸಡಗರ ಸಂಭ್ರಮದೊಂದಿಗೆ ನೇರವೇರಿಸಲಾಯಿತು.
ಸ್ವಾತಂತ್ರ್ಯಕ್ಕೆ ಅಮೃತ ಮಹೋತ್ಸವ ತುಂಬುತ್ತೀರುವ ಈ ಶುಭ ಸಂದರ್ಭದ ಸವಿನೆನಪಿಗಾಗಿ ಕ್ಲಬ್ ವತಿಯಿಂದ ಸರ್ಕಲ್ ನಲ್ಲಿ ನೂತನ ಧ್ವಜ ಸ್ತಂಭ ನಿರ್ಮಾಣ ಮಾಡಿ, ರಾಷ್ಟ್ರಧ್ವಜಾರೋಹಣವನ್ನು ನೇರವೇರಿಸಿದ್ದು ವಿಶೇಷವಾಗಿತ್ತು.
ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ) ಅಧ್ಯಕ್ಷರಾದ ಹೆಚ್.ಪಿ.ಶಿವಶಂಕರಗೌಡ, ಪ್ರಧಾನ ಕಾರ್ಯದರ್ಶಿ ಹುಳ್ಳಿಪ್ರಕಾಶ, ಖಜಾಂಚಿ ಬಾರಿಕರ ಗಂಗಾಧರ, ಮುಖಂಡರಾದ ಬ್ಯಾಡಿಗಿ ಪ್ರಭಾಕರ, ಹುಳ್ಳಿ ಮಂಜುನಾಥ, ಕೊರಗಲ್ ಗಿರೀಶ್, ಶರಣಪ್ಪ, ಬಡಿಗೇರ್ ಬಸವರಾಜ, ಜಿಎಂ ಶಂಕರ, ಶಿವಕುಮಾರ ಶೆಟ್ಟರ್, ಗುರುಸ್ವಾಮಿ, ಸಿಎಂ.ಮಂಜುನಾಥ, ಡ್ರೈವರ್ ಚಂದ್ರು, ಕುದರಿ ಪ್ರಕಾಶ, ಬಿ.ಸಂದೀಪ, ಕೋಟಿ, ರಾಚಣ್ಣನ್ನವರ ಸಂತೋಷ, ನೂರಿ, ಕೆಎಂ.ಹರ್ಷ, ಅಳ್ಳಳ್ಳಿ ಮಂಜುನಾಥ, ಆಟೋ ಹುಲುಗ, ತರಕಾರಿ ಗಂಗಾ, ಪ್ರದೀಪ್, ಸಿಡ್ಸ್ ಸಿದ್ದೇಶ, ಅನುಪ, ಬಡಿಗೆರ್ ಮೌನೇಶ, ಶ್ರೀಧರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಮಕ್ಕಳು, ಸಾರ್ವಜನಿಕರಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.