ಪತ್ರಿಕಾ ದಿನಾಚರಣೆಗೆ ಪ್ರೀತಿಯ ಆಹ್ವಾನ; ಬಳ್ಳಾರಿ-ವಿಜಯನಗರ ಜಿಲ್ಲೆಗಳ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ

0
304

ಅತ್ಮೀಯರೇ ನಮಸ್ಕಾರ,
ತಮಗೆಲ್ಲ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಜುಲೈ 2 ಶನಿವಾರ ಬೆಳಿಗ್ಗೆ 10-30ಕ್ಕೆ ಹಗರಿಬೆಮ್ಮನಹಳ್ಳಿ ಪಟ್ಟಣದ ರಾಮನಗರದ ಗುರುಭವನದಲ್ಲಿ ಸುನಾಮಿ ಪತ್ರಿಕೆ ವತಿಯಿಂದ ಈ ಜಿಲ್ಲೆಯ ಹೆಮ್ಮೆಯ ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ) ಸಹಕಾರದೊಂದಿಗೆ ಪತ್ರಿಕಾ ದಿನಾಚರಣೆ ಹಾಗೂ ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಗಳ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭವ ಆಯೋಜಿಸಿಲಾಗಿದ್ದು.

ಪ್ರಜಾವಾಣಿ ಪತ್ರಿಕೆಯ ಸಂಪಾದಕರಾದ ರವೀಂದ್ರ ಜಿ.ಭಟ್ ರವರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಜೆಎಂ ಅನಿಲಕುಮಾರ ರವರು, ಹಿರಿಯ ಸಾಹಿತಿ, ಹೆಸರಾಂತ ಕಥೆಗಾರರಾದ ಕೇಶವರಡ್ಡಿ ಹಂದ್ರಾಳ ರವರು, ಹಿರಿಯ ಪರಿಸರ ತಜ್ಞರಾದ ಡಾ.ಹೆಚ್.ಆರ್.ಸ್ವಾಮಿ ಅವರು, ನಮ್ಮ ನಡುವಿನ ಸಮಾಜಮುಖಿ ಚಿಂತಕರಾದ ಕುರಿ ಶಿವಮೂರ್ತಿ ರವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀಯುತ ಭೀಮನಗೌಡ ಕಾಶಿರೆಡ್ಡಿ, ಅಧ್ಯಕ್ಷರು ಮಿಡಿಯಾ ಸ್ಟಡಿ ಸೆಂಟರ್(ಕಂಪ್ಲಿ),ಬೆಂಗಳೂರು.
ಶ್ರೀಯುತ ವಿ.ಎಂ ನಾಗಭೂಷಣ, ಪತ್ರಕರ್ತರು, ಪ್ರಜಾವಾಣಿ, ಸಂಡೂರು. ಶ್ರೀಯುತ ಉಚ್ಹೆಂಗಪ್ಪ, ಪತ್ರಕರ್ತರು, ಜನತಾವಾಣಿ, ಹರಪನಹಳ್ಳಿ. ಶ್ರೀಯುತ ಜಾನ್ ಜೋಸೆಫ್,ಹಿರಿಯ ಪತ್ರಕರ್ತರು, ವಿಜಯನಗರ. ಶ್ರೀಯುತ ರಾಮಮೂರ್ತಿ ನವಲಿ, ಪತ್ರಕರ್ತರು, ಕನ್ನಡಪ್ರಭ, ಗಂಗಾವತಿ. ಶ್ರೀಯುತ ಸೋಮಶೇಖರ ಆರಾಧ್ಯ, ಪತ್ರಕರ್ತರು, ಪ್ರಜಾವಾಣಿ ಕೂಡ್ಲಿಗಿ. ಶ್ರೀಯುತ ಕೆ. ಗೋಪಾಲ್, ಸಂಪಾದಕರು ಹಾಯ್ ಸಂಡೂರ್, ಪತ್ರಿಕೆ ಸಂಡೂರು. ಶ್ರೀಯುತ ಬಂಗಿ ದೊಡ್ಡ ಮಂಜುನಾಥ, ಪತ್ರಕರ್ತರು, ವಿಜಯವಾಣಿ, ಕಂಪ್ಲಿ. ಶ್ರೀಯುತ ಜಿ.ವಿ.ಸುಬ್ಬರಾವ್, ಪತ್ರಕರ್ತರು, ಬಳ್ಳಾರಿ ಬೆಳಗಾಯಿತು, ಮರಿಯಮ್ಮನಹಳ್ಳಿ. ಬಾರಿಕರ ಗಂಗಾಧರ, ಹಿರಿಯ ಪತ್ರಕರ್ತರು, ಹಗರಿಬೊಮ್ಮನಹಳ್ಳಿ. ಇವರುಗಳಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ,ಪತ್ರಕರ್ತ ಮಿತ್ರರೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ.

ತಾವು ಕೂಡ ಸಮಾರಂಭಕ್ಕೆ ಬರಲೇಕು. ನಿಮ್ಮನ್ನು ಮುಖತಹ ಆಹ್ವಾನಿಸಲಾಗಲು ಸಾಧ್ಯವಾಗಿಲ್ಲ. ಇದನ್ನೆ ಆಹ್ವಾನ ಎಂದು ಪರಿಗಣಿಸಲು ನನ್ನ ವಿನಂತಿ.

ಹುಳ್ಳಿಪ್ರಕಾಶ
ಸಂಪಾದಕರು
ಬಳ್ಳಾರಿ ಸುನಾಮಿಪತ್ರಿಕೆ
9448234961

LEAVE A REPLY

Please enter your comment!
Please enter your name here