ಕೊಟ್ಟೂರು:ಆಗಸ್ಟ್ :28: ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ ವೀರೇಶೈವ ಲಿಂಗಾಯತ ಪಂಚಮಸಾಲಿ ಕೊಟ್ಟೂರು ತಾಲೂಕು ಘಟಕದಿಂದ ಇಲ್ಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ, ಪಂಚಮಸಾಲಿ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕೊಟ್ಟೂರು ತಾಲೂಕು ಘಟಕ ಅಧ್ಯಕ್ಷ ಚಾಪಿ ಚಂದ್ರಪ್ಪ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಚಮಸಾಲಿ ಹರಿಹರ ಪೀಠದ 2008 ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಅವರು ದಿವ್ಯ ಸಾನಿಧ್ಯ ವಹಿಸಲಿದ್ದು ಕಾರ್ಯಕ್ರಮವು ಶ್ರೀ ಗುರುಬಸವೇಶ್ವರ ಕಲ್ಯಾಣ ಮಂಟಪ (ಕುಂಬಾರ ಕಲ್ಯಾಣ ಮಂಟಪ)ದಲ್ಲಿ ಜರುಗಲಿದ್ದು ಕಾರ್ಯಕ್ರಮಕ್ಕೆ ಸಮಾಜದ ಅನೇಕ ಗಣ್ಯ ಮಾನ್ಯರು ಆಗಮಿಸುತ್ತಿದ್ದು, ಇವರೊಂದಿಗೆ ಪಟ್ಟಣ ಮತ್ತು ತಾಲೂಕಿನ ಸಮುದಾಯದ ಸರ್ವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿರುವರು.
ವರದಿ: ಶಿವರಾಜ್ ಕನ್ನಡಿಗ