ಸಂಡೂರು:ಸೆ:13:-ತಾಲೂಕಿನ ಚೋರನೂರು ಹೋಬಳಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲಾಬಂಡೆ ಗ್ರಾಮದಿಂದ ಪಕ್ಕದ ಕೂಡ್ಲಿಗಿ ತಾಲೂಕಿನ ದಿಬ್ಬದಹಳ್ಳಿ ರಸ್ತೆಯ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕು ಗಡಿಯಂಚಿನ ಗ್ರಾಮ ನಲ್ಲಾ ಬಂಡೆ -ದಿಬ್ಬದಹಳ್ಳಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಓಡಾಡಲು ತೊಂದರೆಯಾಗಿದೆ ಇದೇ ರಸ್ತೆಯ ಮುಖಾಂತರ ಲಕ್ಕಲಹಳ್ಳಿ ಸೂರವ್ವನಹಳ್ಳಿ… ಗೆಣ್ಣತಿಕಟ್ಟೆ… ಗ್ರಾಮದಿಂದ ರೈತರು ಪಸಲು ತರಲು ಮತ್ತು ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿವೆ.
ಈ ರಸ್ತೆಯು ದಿಬ್ಬದಹಳ್ಳಿ ಇಂದ ಕೂಡ್ಲಿಗಿ ಮತ್ತು ಬಳ್ಳಾರಿ ತೆರಳಲು ಸಮೀಪದ ಅನುಕೂಲಕರ ಮಾರ್ಗವಾಗಿದೆ.
ಗ್ರಾಮ ವಾಸ್ತವ್ಯ ನಡೆದಾಗ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಅದರ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಿಂದೆ ಬಳ್ಳಾರಿ ಲೋಕಸಭಾ ಸದಸ್ಯರಾದ ಅಂತಹ ವೈ ದೇವೇಂದ್ರಪ್ಪ ಅವರಿಗೂ ಕೂಡ ಮನವಿ ಸಲ್ಲಿಸಲಾಗಿದೆ.
ಯಾವಾಗ ಅಧಿಕಾರಿಗಳು ತಾಲೂಕ ಆಡಳಿತ ಈ ವಿಷಯವಾಗಿ ಗಮನ ಹರಿಸುತ್ತಿಲ್ಲ ಮುಂದಿನ ದಿನಗಳಲ್ಲಿ ಸದರಿ ರಸ್ತೆ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆ ಎಲ್ಲಾದರೂ ಅನುಕೂಲ ಕಲ್ಪಿಸಿ ಕೊಡಬೇಕೆಂದು
ಗ್ರಾಮದ ಕೆ. ಪ್ರಹ್ಲಾದ ಕೆ. ಬಾಲರಾಜ್ ಪಿ ಹನುಮಂತಪ್ಪ ದೊಡ್ಡ ತಿಪ್ಪೇಸ್ವಾಮಿ ಓಬಣ್ಣ ಸ್ವಾಮಿ ಎರಿಸ್ವಾಮಿ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.