ಕೊಟ್ಟೂರಿನ ಕೆರೆ ಸ್ವಚ್ಛತೆ: ಪ,ಪಂ ಮುಖ್ಯಾಧಿಕಾರಿ ನಸರುಲ್ಲಾ ಎ

0
645

ಕೊಟ್ಟೂರು: ಪಟ್ಟಣದ ಕೆರೆಯು 13 ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಕೋಡಿ ಬಿದ್ದಿದ್ದು, ಗಿಡಗಂಟೆಗಳನ್ನ ಸ್ವಚ್ಛತೆ ಕಾರ್ಯ ಪ,ಪಂ ಮುಖ್ಯಾಧಿಕಾರಿ ನಸರುಲ್ಲಾ ಎ ಸ್ವಯಂ ಅವರೇ ಕುದ್ದು ಅಲ್ಲೇ ಇದ್ದು ಸ್ವಚ್ಛತೆ ಕಾರ್ಯ ಮಾಡಿದರು. ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಇದ್ದರು ಕೆರೆಪ್ರಾಂತ್ಯೆದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಜಾಗೃತರಾಗಿರಲು ಹಾಗೂ ತಮ್ಮ ಜಾನುವಾರುಗಳನ್ನು ಕೆರೆ ಪ್ರದೇಶಕ್ಕೆ ಬಿಡದೆ, ಸುರಕ್ಷಿತ ಸ್ಥಳದಲ್ಲಿರಿಸಲು ತಿಳಿಸಿ ಯಾವುದೇ ಪ್ರಾಣಹಾನಿ ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಕೆರೆಯಲ್ಲಿ ಈಜಾಡುವುದನ್ನು ಸಂಪೂರ್ಣವಾಗಿ ನಿಷೇದಿಸಿರುವುದಾಗಿ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ವಾಹನದ ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ತಿಳಿಸಿ ಜಾಗೃತಿ ಮೂಡಿಸಲಾಗಿರುತ್ತದೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here