ತೋರಣಗಲ್ಲು ಗ್ರಾಮದಲ್ಲಿ “ವಿಶ್ವ ಶೌಚಾಲಯ ದಿನಾಚರಣೆ” ಜಾಗೃತಿ ಕಾರ್ಯಕ್ರಮ,

0
436

ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರ, ಬೆಂಗಳೂರು, ಮತ್ತು ಸಾಹಸ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆಯ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಯಿತು,

ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮೊದಲಿಗೆ ಗ್ರಾಮದ ನೈರ್ಮಲ್ಯ ಕಾಪಾಡಲು ಸ್ವಚ್ಛತೆ ಕಾರ್ಯ ಮಾಡಿ “ರೋಗ ಮುಕ್ತ ಸಮಾಜ ನಿರ್ಮಾಣ” ಮಾಡಲು ದುಡಿಯುತ್ತಿರುವ ತಮ್ಮೆಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳನ್ನು ಆರೋಗ್ಯ ಇಲಾಖೆ ಅರ್ಪಿಸುತ್ತಿದೆ, ರೋಗ ಮುಕ್ತ ಗ್ರಾಮವಾಗಲು ನಿಮ್ಮ ನಿತ್ಯ ಸೇವೆಯಲ್ಲಿ ಬಯಲು ಶೌಚಕ್ಕೆ ಹೋಗುವರು ಕಂಡು ಬಂದರೆ ಅವರಿಗೆ ನೈರ್ಮಲ್ಯ ಕುರಿತು ಮನವರಿಕೆ ಮಾಡಿ ಬಯಲಿಗೆ ಹೊಗುವವರನ್ನು ತಡೆಯುವಂತೆ ಸಲಹೆ ನೀಡಿದರು,

ಪ್ರತಿಯೊಬ್ಬರೂ ಗೃಹ ಶೌಚಾಲಯ ಬಳಸುವುದರ ಮೂಲಕ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು, ಟೈಫಾಯಿಡ್, ಹೆಪಟೈಟಿಸ್ ನಂತಹ ಕಾಯಿಲೆಗಳನ್ನು ತಡೆಗಟ್ಟಬಹುದು, ಮತ್ತು ರಕ್ತ ಹೀನತೆಗೆ ಕಾರಣವಾಗುವ ಹುಳುಗಳ ಭಾದೆಯನ್ನು ತಪ್ಪಿಸಬಹುದು, ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಗೃಹ ಶೌಚಾಲಯ ಬಳಸುವುದು ಅವರ ಹಕ್ಕು ಎಂಬುದನ್ನು ಅರಿತುಕೊಳ್ಳಬೇಕು, ಗ್ರಾಮಗಳಲ್ಲಿ ಇಂದಿಗೂ ರಸ್ತೆಗಳ ಮೇಲೆ ಮಲವಿಸರ್ಜನೆ ಮಾಡುವುದು ಕಾಣುತ್ತೇವೆ, ಕೆಲವು ಗ್ರಾಮಗಳಲ್ಲಿ ಮಹಿಳೆಯರು ಕತ್ತಲಾಗುವುದನ್ನು ಕಾಯುತ್ತಾರೆ, ಕತ್ತಲಲ್ಲಿ ಹಾವು-ಚೇಳುಗಳ ಕಡಿತಕ್ಕೆ ಬಲಿಯಾಗಿರುವುದನ್ನು ಕೇಳಿದ್ದೇವೆ,

ಬಯಲು ಶೌಚದಿಂದ ಆರೋಗ್ಯದ ಮೇಲೆ ಆಗುವ ಹಾನಿಗಳನ್ನು ತಪ್ಪಿಸಲು 2001 ರಿಂದ ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತಿದೆ, ವಿಶ್ವಸಂಸ್ಥೆ 2030 ರ ವೇಳೆಗೆ ಪ್ರತಿಯೊಬ್ಬರೂ ಸುರಕ್ಷಿತ ಶೌಚಾಲಯ ಹೊಂದುವ ಗುರಿಯನ್ನು ಇಟ್ಟುಕೊಂಡು ಕ್ರಮಗಳನ್ನು ಕೈಗೊಂಡಿದೆ, ಶೌಚಾಲಯ ಇಲ್ಲದವರು ಸರ್ಕಾರದಿಂದ ದೊರೆಯುವ ಅನುದಾನವನ್ನು ಬಳಕೆ ಮಾಡಿಕೊಂಡು ಗೃಹ ಶೌಚಾಲಯ ನಿರ್ಮಿಸಿ ಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು, ಕೆಲವರು ಶೌಚಾಲಯ ನಿರ್ಮಾಣ ಮಾಡಿಕೊಂಡರೂ ಬಳಸುವುದಿಲ್ಲ ಅಂತವರು ಬಯಲು ಶೌಚ ಮಾಡುವುದರಿಂದ ರೋಗಗಳು ಹರಡುತ್ತವೆ ಎಂಬುದುನ್ನು ಅರಿತುಕೊಂಡು ಗೃಹ ಶೌಚಾಲಯ ಬಳಸಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಎರ್ರಿಸ್ವಾಮಿ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಯು.ಶಶಿಧರ್, ಸಾಹಸ ಮೇಲ್ವಿಚಾರಕ ಸುಭಾಶ್ ಚಂದ್ರ, ಶಂಕರ್, ಪೌರ ಕಾರ್ಮಿಕರಾದ ಬೆಂಕೆಪ್ಪ, ಹುಲಿಗೆಮ್ಮ, ಜಯಮ್ಮ, ಚನ್ನಮ್ಮ,ಪದ್ಮಾವತಿ,ನಾಗಲಕ್ಷ್ಮಿ,ಗೌರಮ್ಮ,ಭಾಗ್ಯಮ್ಮ,ಮಾನಮ್ಮ,ರೇಣುಕಾ, ಮರೆಮ್ಮ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here