ಚಿತ್ರದುರ್ಗ:ಜ:28:-ಕರ್ನಾಟಕ ರಾಜ್ಯ ವಕೀಲರ ಸಹಯೋಗದೊಂದಿಗೆ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ಬಳ್ಳಾರಿಯಿಂದ ಬೆಂಗಳೂರಿಗೆ ವಕೀಲರ ಪಾದಯಾತ್ರೆಯು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರಾಯಪುರ ಗೇಟ್ ಬಳಿ ಪಾದಯಾತ್ರೆಯನ್ನು ಮೊಳಕಾಲ್ಮೂರು ತಾಲೂಕಿನ ವಕೀಲರಾದ ಚಿಕ್ಕೇರಳ್ಳಿ ಶ್ರೀನಿವಾಸ್ ಅವರು ಬರಮಾಡಿಕೊಂಡರು.
ದಿನಾಂಕ 26.01.2023ರಿಂದ ದಿನಾಂಕ 9.2.2023ರ ವರೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ದಿನಾಂಕ 28.1.2023 ರಂದು ರಾಯಪುರ ಗೇಟ್ ಬಳಿ ಮೊಳಕಾಲ್ಮೂರು ಮತ್ತು ರಾಯದುರ್ಗ ವಕೀಲರು ಇವರ ಪಾದಯಾತ್ರೆಗೆ ಬೆಂಬಲವನ್ನು ನೀಡಿದರು
ಈ ಸಂದರ್ಭದಲ್ಲಿ ಜಿ ಎಂ ಗಾದಿಲಿಂಗಪ್ಪ ವಕೀಲರು ಬಳ್ಳಾರಿ, ಶ್ರೀಯುತ ಲಕ್ಷ್ಮಿ ಬೆಂಗಳೂರು ವಕೀಲರು, ಇವರುಗಳು ಪಾದಯಾತ್ರೆಯ ಈ ಕಾರ್ಯಕ್ರಮದಲ್ಲಿ ಬಾಗಿಯಾಗಿ ಪಾದಯಾತ್ರೆ ಮಾಡುತ್ತಿರುವ ವಕೀಲ ಸಹದ್ಯೋಗಿಗಳಿಗೆ ಪ್ರೋತ್ಸಾಹ, ಕೊಟ್ಟರು. ಮೊಳಕಾಲ್ಮುರಿನ ವಕೀಲರಾದ ಶ್ರೀನಿವಾಸ್ ಮತ್ತು ಆನಂದಪ್ಪ ಮುಂತಾದವರು ಉಪಸ್ಥಿತರಿದ್ದರು
ವರದಿ:-ನಂದೀಶ್ ನಾಯಕ