ಚಿತ್ರದುರ್ಗ:ಜು:12 ಪಟ್ಟಣದ ಪ್ರವಾಸಿ ಮಂದಿರದಲ್ಲಿ ನವ ನಾಯಕತ್ವದಲ್ಲಿ ನವ ವಿಚಾರಗಳೊಂದಿಗೆ ನಾಡು-ನುಡಿ-ನೆಲ-ಜಲ ಭಾಷೆಗಾಗಿ ಕನ್ನಡ ರಣಧೀರರ ಪಡೆ ಸಂಘಟನೆ ಪೂರ್ವಬಾವಿ ಸಭೆ ನಡೆಯಿತು.
ಸಭೆಗೆ ರಾಜ್ಯಾಧ್ಯಕ್ಷರಾದ ಎಂ ಚೇತನ್ ಗೌಡ ಮತ್ತು ತಾಲೂಕು ಮಟ್ಟದ ಸಂಘಟನಾ ಕಾರ್ಯಕರ್ತ ತಿಪ್ಪೇಸ್ವಾಮಿರವರು ಮಾತನಾಡಿ ಕನ್ನಡ ಭಾಷೆ ಉಳಿಸುವ ಕೆಲಸ ಮಾಡಬೇಕು ಗಡಿ ಬಾಗಗಳಳ್ಳಿ ಕನ್ನಡಭಾಷೆಗೆ ಹೆಚ್ಚು ಮಹತ್ವ ಕೊಡಬೇಕು ಮತ್ತು ನಮ್ಮ ಮೊಳಕಾಲ್ಮುರು ತಾಲ್ಲೂಕು ಅಂದ್ರದ ಗಡಿಬಾಗವಾಗಿದ್ದು ನಾವೆಲ್ಲರೂ ಒಂದಾಗಿ ಸಂಘಟನೆ ಮಾಡಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಡಾಬಾ ಪ್ರಕಾಶ್, ಗಾಯಕ ಮಂಜುನಾಥ್, ಯುವ ಮುಖಂಡ ಶ್ರೀನಿವಾಸು ಸೇರಿ ಮತ್ತು ಎಲ್ಲಾ ಸಂಘಟಕರ ಪದಾಧಿಕಾರಿಗಳು ಸೇರಿ ಪೂರ್ವಭಾವಿ ಸಭೆ ನಡೆಸಲಾಯಿತು
ವರದಿ:- ನಂದೀಶ್ ನಾಯಕ