ಬಳ್ಳಾರಿ,ಏ.7: ಸಂಡೂರು ತಾಲ್ಲೂಕಿನ ತೋಕನಹಳ್ಳಿ ತಾಂಡಾದ ವಾಲ್ಯನಾಯ್ಕ್ ತಂದೆ ಢಾಕನಾಯ್ಕ್ ಇವರ ಕಿರಾಣಿ ಅಂಗಡಿಯ ಮೇಲೆ ಬುಧವಾರ ಅಬಕಾರಿ ನಿರೀಕ್ಷಕ ತುಕಾರಾಮ ನಾಯ್ಕ ಹಾಗೂ ಸಿಬ್ಬಂದಿಯೊಂದಿಗೆ ಮಾಹಿತಿ ಮೇರೆಗೆ ದಾಳಿ ಮಾಡಿದ ಸಮಯದಲ್ಲಿ, ಅಂಗಡಿಯ ಪಕ್ಕದ ಒಂದು ಕೊಣೆಯಲ್ಲಿ 12 ಮದ್ಯದ ಪೆಟ್ಟಿಗೆಗಳು ಪತ್ತೆಯಾಗಿದ್ದು, ಒಟ್ಟು 69.120 ಲೀಟರ್ ಮದ್ಯ ಹಾಗೂ 31.680 ಲೀಟರ್ ಬೀರ್ ಸಂಗ್ರಹಣೆ ಮಾಡಿರುವುದನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರು ತಿಳಿಸಿದ್ದಾರೆ.