ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದ ಕೆ.ಅರ್ ಪಿ ಪಿ ಪಕ್ಷದ ಅಭ್ಯರ್ಥಿ ಡಾ:ಸುರೇಶ್ .

0
234

ಕೊಟ್ಟೂರು: ಹಗರಿಬೋಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ 2023 ರಲ್ಲಿ ನೆಡೆಯವ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿಯಾಗಿ ಡಾ; ಸುರೇಶ್ ಸ್ಪರ್ದಿಸಿಲಿದ್ದಾರೆ

ಹಗರಿಬೋಮ್ಮನಹಳ್ಳಿ ಕ್ಷೇತ್ರದ ಗಜಾಪುರ,ಭತ್ತನಹಳ್ಳಿ,ಅಕ್ಕಾಪುರ, ಕಂದಗಲ್ಲು,ಇನ್ನಿತರ ಗ್ರಾಮಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿ ಡಾ :ಸುರೇಶ್ ರವರು ಮತ್ತು ಕಾರ್ಯಕರ್ತರು
ಮನೆ ಮನೆಗೆ ತೆರಳಿ ಹಿರಿಯರ ಆಶೀರ್ವಾದ ಪಡೆದುಕೊಂಡು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿ ಗ್ರಾಮಗಳಲ್ಲಿ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ಆಗದಿರುವ ಕೆಲಸಗಳ ಬಗ್ಗೆ ಗ್ರಾಮಗಳಲ್ಲಿ ವೀಕ್ಷಣೆ ಮಾಡಿ ಗ್ರಾಮಸ್ಥರ ಜೊತೆ ಮಾತನಾಡಿದರು.

ಈ ಚುನಾವಣೆಯಲ್ಲಿ ನಮ್ಮನ್ನ ಮತದಾರರು ಗೆಲುವಿನಿಂದ ಹಾರಿಸಿ ತನ್ನಿ ನಿಮ್ಮ ಗ್ರಾಮಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಗ್ರಾಮಸ್ಥರಿಗೆ ತಿಳಿಸಿದರು. ಈ ಕ್ಷೇತ್ರದ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು ಈ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ.ಸಾರ್ವಜನಿಕರು ನಮ್ಮ ಪಕ್ಷಕ್ಕೆ ಬೆಂಬಲ ನೀಡಭೇಕೆಂದು ಹೇಳಿದರು

ಈ ಸಂದರ್ಭದಲ್ಲಿ ರಿಯಲ್ ಸ್ಟಾರ್ ಪತ್ರಿಕೆ ಸಂಪದಾಕರು ಉಪೇಂದ್ರ ಡಾ:ಕೆ.ಎಚ್.ಎಂ.ಭರತೇಶ್,ಶಿವಕುಮಾರ್, ವೀರೇಶ್ ಮೋರಿಗೇರಿ, ಕೊಟ್ಟೂರು ಎಂ.ದಿವ್ಯಕೂಮರ್,ಎಂ.ದೇವರಾಜ. ‌ದೂಪದಹಳ್ಳಿ,ಕೊಟ್ರುಗೌಡ್ರು,ಮತ್ತು ಗ್ರಾಮ ಪಂಚಾಯಿತಿ ಸದಸ್ಯರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾರ್ಯಕರ್ತರು.ಮುಖಂಡರು ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here