ತಾರಾನಗರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಕೆ.ಎಸ್. ದಿವಾಕರ್ ಪ್ರಚಾರ

0
235

ಸಂಡೂರು ತಾಲೂಕಿನ ತಾರಾನಗರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಕೆ.ಎಸ್.ದಿವಾಕರ್ ಅವರು ಅಪಾರ ಸಂಖ್ಯೆಯ ಸಮ್ಮುಖದಲ್ಲಿ ಪ್ರಚಾರಗೊಂಡು ಗುರುವಾರ ಫುಟ್ಬಾಲ್ ಗುರುತಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

ನಂತರ ಕೆ.ಎಸ್.ದಿವಾಕರ್ ಮಾತನಾಡಿ, ಸಂಡೂರು ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಈ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಲು ಮತದಾರರು ನಿರ್ಧರಿಸಿದ್ದಾರೆ.

ವಿರೋಧ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಫುಟ್ಬಾಲ್ ಆಟ ಆಡಲಿದ್ದಾರೆ ಕ್ಷೇತ್ರದ ಜನರು. ಪ್ರೀತಿ, ಅಭಿಮಾನದಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಹಾಗೂ ಕಾರ್ಯಕರ್ತರು ನಮ್ಮನ್ನು ಅದ್ಧೂರಿಯಾಗಿ ಸ್ವಾಗತಿಸಿರುವುದನ್ನು ಕಂಡಿದ್ದು, ಗೆಲುವಿನ ಆಶೀರ್ವಾದ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಶಂಕರ್ ಸೇರಿದಂತೆ ಅಭಿಮಾನಿಗಳು, ಕಾರ್ಯಕರ್ತರಿದ್ದರು.

ವರದಿ; ಗೋಪಾಲ್

LEAVE A REPLY

Please enter your comment!
Please enter your name here