ಕ್ಷಯ ಮುಕ್ತ ಗ್ರಾಮ ರೂಪಿಸಲು ಕೈಜೋಡಿಸುವ ಕುರಿತು ಗುಂಪು ಸಭೆಗಳ ಮೂಲಕ ಜಾಗೃತಿ

0
18

ತಾಲೂಕಿನ ತೋರಣಗಲ್ಲು ಗ್ರಾಮದ ಚಪ್ಪರದಳ್ಳಿ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಮತ್ತು ಕೆ.ಹೆಚ್.ಪಿ.ಟಿ ಸಂಸ್ಥೆಯ ಸಹಯೋಗದಲ್ಲಿ ಗುಂಪು ಸಭೆಗಳ ಮೂಲಕ ಕ್ಷಯರೋಗ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರಧಾನ ಮಂತ್ರಿಯವರ ಕಲ್ಪನೆಯಂತೆ 2025 ರೊಳಗೆ ಭಾರತವನ್ನು ಕ್ಷಯ ಮುಕ್ತ ಭಾರತ ರೂಪಿಸಲು ಆರೋಗ್ಯ ಇಲಾಖೆ ಪ್ರಯತ್ನ ಮಾಡುತ್ತಿದ್ದು ಇದಕ್ಕೆ ಕೆ.ಹೆಚ್.ಪಿ.ಟಿ ಸಂಸ್ಥೆಯೂ ಕೈಜೋಡಿಸಿದೆ, ಕ್ಷಯ ಮುಕ್ತ ಭಾರತ ರೂಪಿಸಲು ಸಮುದಾಯದ ಪಾತ್ರ ಮಹತ್ವದ್ದಾಗಿದೆ,ನಮ್ಮ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಅಧಿಕ,ಅವರು ಯಾವದೇ ರಾಜ್ಯದವರಾಗಿರಲಿ ಇಲ್ಲಿಯವರೇ ಆಗಿರಲಿ ನಮ್ಮ ದೇಶವನ್ನು ಕ್ಷಯ‌ ಮುಕ್ತ ಮಾಡಬೇಕಿದೆ, ಯಾರಿಗಾದರೂ ಎದೆ ನೋವು,ಕೆಮ್ಮು,ಸಂಜೆ ಜ್ವರ,ಬೆವರು,ಹಸಿವೆ ಇಲ್ಲದಿರುವುದು, ತೂಕ ಕಡಿಮೆಯಾಗುವುದು, ಕಫ ಬರುವುದು,ಕಫದಲ್ಲಿ ರಕ್ತದ ಕಣಗಳು ಇರುವುದು ಕಂಡುಬಂದರೆ ಹಾಗೂ ಕುತ್ತಿಗೆ,ಕಂಕುಳಲ್ಲಿ, ಸಂದುಗಳಲ್ಲಿ ಗಡ್ಡೆಗಳೇನಾದರೂ ಇದ್ದರೂ ನಿರ್ಲಕ್ಷ್ಯ ಮಾಡಬೇಡಿ ಆದಷ್ಟು ಬೇಗ ಆರೋಗ್ಯ ಕೇಂದ್ರಕ್ಕೆ ಬಂದು ಕಫ ಪರೀಕ್ಷೆ ಹಾಗೂ ತಪಾಸಣೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಲಾಯಿತು, ಇತರೆ ರಾಜ್ಯಗಳಿಂದ ವಲಸೆ ಬಂದವರು ಸಹಾ ಇಲ್ಲೇ ತಪಾಸಣೆಗೆ ಒಳಗಾಗಲು ಸೂಚಿಸಿದರು,ದೃಢಪಟ್ಟರೆ ಆರು ತಿಂಗಳು ಉಚಿತ ಚಿಕಿತ್ಸೆ ಜೊತೆಗೆ 500/- ರೂಪಾಯಿ ಸಹಾಯ ಧನ ನೀಡಲಾಗುತ್ತದೆ, ಕೆ.ಹೆಚ್.ಪಿ
ಟಿ ಸಂಸ್ಥೆಯಿಂದ ಶಕ್ತಿ ಪುಡಿ ಪಾಕೆಟ್ ಹಾಗೇ ನಿಕ್ಷಯ್ ಮಿತ್ರ ಯೋಜನೆಯಡಿ ದಾನಿಗಳಿಂದ ಪಡೆದು ಪೌಷ್ಟಿಕ ಆಹಾರದ ಕಿಟ್‌ಗಳನ್ನು ಸಹಾ ಆರು ತಿಂಗಳ ಕಾಲ ಒದಗಿಸಲಾಗುತ್ತದೆ, ಹಾಗೆನಾದರೂ ಕ್ಷಯರೋಗದ ಲಕ್ಷಣಗಳು ಇರುವರು ನಿಮ್ಮ ಕಣ್ಣಿಗೆ ಬಿದ್ದರೆ ನಮ್ಮ ಸ್ವಯಂ ಸೇವಕರಿಗೆ ತಿಳಿಸಿ ಅವರು ಮನವೊಲಿಸಿ ಆಸ್ಪತ್ರೆಗೆ ಕರೆತರುವ ಪ್ರಯತ್ನ ಮಾಡುವರು, ಎಲ್ಲರೂ ಕೈಜೋಡಿಸಿದಾಗ ಕ್ಷಯರೋಗ ಮುಕ್ತ ಭಾರತ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು,

ಈ ಕೆ.ಹೆಚ್.ಪಿ.ಟಿ ಮೇಲ್ವಿಚಾರಕಿ ಆಶಾ, ಸ್ವಯಂ ಸೇವಕಿ ಉಮಾದೇವಿ,ವಿನೋದ, ಕುಮಾರಿ, ಸಾರ್ವಜನಿಕರಾದ ಲಕ್ಷ್ಮಿ, ಈರಮ್ಮ,ರಾಧ,ಉಷಾ,ಹನುಮಂತಮ್ಮ,ಮಹೇಶ್ವರಿ,ಹುಲಿಗೆಮ್ಮ,ಜಾಹೀದಾ,ರಾಜೇಶ್ವರಿ, ಸಾವಿತ್ರಿ, ಗೌರಮ್ಮ,ಮಾಯಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here