ಕೊಟ್ಟೂರು: ಸ್ವಾತಂತ್ರೋತ್ಸವದ ಸಂಭ್ರಮ ಸಡಗರ

0
234

ಕೊಟ್ಟೂರು: ತಾಲೂಕಿನಲ್ಲಿ ಎಲ್ಲೆಡೆ ಸೋಮವಾರ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಡಗರ ಸಂಭ್ರಮ ಕಂಡುಬಂತು. ಪಟ್ಟಣದ ಅಖಂಡ ಭಾರತ ದೇಶಾಭಿಮಾನಿಗಳ ಸಂಘಟನೆಯ ಯುವಕರು ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ಭಾನುವಾರ ಮಧ್ಯ ರಾತ್ರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪಟಾಕಿ ಸಿಡಿ ಸಂಭ್ರಮಿಸಿದರು.

ಪೊಲೀಸ್‌ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ ಎಚ್‌.ಕೆಂಚಾರೆಡ್ಡಿ, ಯುವ ಮುಖಂಡರಾದ ಬಿ.ಆರ್. ಅರವಿಂದ್ ಬಸಾಪುರ, ಡಾ. ರಾಕೇಶ, ವಿಕಾಸ್ ಬಸಾಪುರ, ಮತ್ತಿತರರು ಪಾಲ್ಗೊಂಡಿದ್ದರು.

ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದ ಧ್ವಜಸ್ತ೦ಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಅಧ್ಯಕ್ಷೆ ಭಾರತಿ ಸುಧಾಕರ ಪಾಟೀಲ್‌ ನೆರೆವೇರಿಸಿದರು. ಮುಖ್ಯಾಧಿಕಾರಿ ಎ.ನಸುರುಲ್ಲಾ ಸೇರಿದಂತೆ ಸದಸ್ಯರು ಸಿಬ್ಬ೦ದಿ ಪಾಲ್ಗೊಂಡಿದ್ದರು. ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಾಹಕಾಧಿಕಾರಿ ವಿಜಯಕುಮಾರ ಬೆಣ್ಣಿ, ಎಪಿಎಂಸಿಯ ಕಾರ್ಯದರ್ಶಿ ವೀರಣ್ಣ, ತಾಲೂಕು ಕಾರ್ಯಲಯದಲ್ಲಿ ತಹಶೀಲ್ದಾರ್ ಎಂ.ಕುಮಾರಸ್ವಾಮಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದರಾಮ ಕಲ್ಮರ್ ನೆರವೇರಿಸಿದರು. ಪಟ್ಟಣದ ಶಾಲಾ ಕಾಲೇಜ್, ಅಂಚೆ ಕಚೇರಿ ಬ್ಯಾಂಕ್‌ಗಳು ಮತ್ತಿತರೆಡೆ ಸಂಸ್ಥೆಯ ಮುಖ್ಯಸ್ಥರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರೋತ್ಸವದ ದಿನದ ನಿಮಿತ್ತ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ 6ರಿಂದಲೇ ಬೃಹತ್‌ ಪ್ರಭಾತ್ ಫೇರಿ ಕೈಗೊಂಡು ರಾಷ್ಟ್ರನಾಯಕರ ಪರ ಘೋಷಣೆಗಳನ್ನು ಕೂಗಿದರು.

LEAVE A REPLY

Please enter your comment!
Please enter your name here