ಸಂಡೂರು: ಅ: 09: ತಾಲೂಕಿನ ವಡ್ಡು ಗ್ರಾಮದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ತೋರಣಗಲ್ಲು ಗ್ರಾಮ ಪಂಚಾಯತಿ ಸದಸ್ಯರಾದ ತಾಯಮ್ಮ ಮಾತನಾಡಿ ಯಾವುದೇ ಮಾನಸಿಕ ತೊಂದರೆ ಇದ್ದರೆ ಹತ್ತಿರದ ಆಸ್ಪತ್ರೆಗೆ ಹೋಗ ಬೇಕು, ತಪಾಸಣೆ ಮಾಡಿಸಬೇಕು,ಚಿಕಿತ್ಸೆ ಕೊಡಿಸ ಬೇಕು, ಅದು ಬಿಟ್ಟು ತಾಯಿತಾ, ಅಂತ್ರ,ಮಂತ್ರದ ಮೊರೆ ಹೋಗಬಾರದು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ನಾನಾ ಬಗೆಯ ಮಾನಸಿಕ ಕಾಯಿಲೆಗಳು ಇದ್ದು, ಎಲ್ಲಾ ಮಾನಸಿಕ ಕಾಯಿಲೆಗಳಿಗೆ ಟೆಲಿಮನಸ್ 14416 ಸಹಾಯವಾಣಿ ಮೂಲಕ ಚಿಕಿತ್ಸೆ ಮತ್ತು ಸಮಾಲೋಚನೆ ಲಭ್ಯವಿದೆ, ಕೇವಲ ದೈಹಿಕ ಅರೋಗ್ಯವಲ್ಲದೇ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಿದೆ, ಶೇಕಡ ಹತ್ತರಷ್ಟು ಜನರು ಒಂದಲ್ಲೊಂದು ಮಾನಸಿಕ ತೊಂದರೆಯಿಂದ ಬಳಲುತ್ತಿರುತ್ತಾರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಉತ್ತಮ ಸಲಹೆ ನೀಡಿ ಸ್ವಾಲಂಭಿಗಳಾಗಿ ಉಪಯುಕ್ತ ಜೀವನ ನಡೆಸುವಂತೆ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು, 1992 ರಿಂದ ಪ್ರತಿ ವರ್ಷ ಅಕ್ಟೋಬರ್ 10 ರಂದು ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ,ತೀವ್ರ ಸ್ವರೂಪದ ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದು, ಮತ್ತು ಸಾಮಾನ್ಯ ಮಾನಸಿಕ ತೊಂದರೆ ಮೇನಿಯಾ,ಸ್ಕಿಜೋಫ್ರೇನಿಯಾ, ಗೀಳು, ದೇವರು, ದೆವ್ವ ಬಂದಂತೆ ವರ್ತಿಸುವವರಿಗೆ ಸಾಂತ್ವನ, ಮನೋ ಚಿಕಿತ್ಸೆ ನೀಡಬೇಕಾಗುತ್ತದೆ, ಉತ್ತಮ ಸ್ನೇಹಿತರ ಸಂಬಂಧ, ವ್ಯಾಯಾಮ, ದ್ಯಾನ, ಪ್ರಕೃತಿಯೊಂದಿಗೆ ಮನಸ್ಸನ್ನು ಉತ್ತಮ ಸುಸ್ಥಿರವಾಗಿಟ್ಟುಕೊಳ್ಳುವುದರಿಂದ ಮತ್ತು ಮಾದಕ ವ್ಯಸನ, ಮದ್ಯಪಾನ, ಧೂಮಪಾನಗಳನ್ನು ತ್ಯಜಿಸುವುದರಿಂದ ಸಂಪೂರ್ಣ ಆರೋಗ್ಯವಂತರಾಗಿರ ಬಹುದು ಎಂದು ತಿಳಿಸಿದರು, ಮಕ್ಕಳಲ್ಲಿ ಅವರ ಸಾಮರ್ಥ್ಯ ಗುರುತಿಸಿ ಜೀವನ ಕೌಶಲ್ಯಗಳ ಬಗ್ಗೆ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗುಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು,
ಹಾಗೆ ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ಎರಡನೇ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮದಡಿ ತಜ್ಞರು ಅಗಮಿಸಿ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ, ಸಲಹೆ ನೀಡುವರು ಇದನ್ನು ಸಹಾ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು, 104 ಆರೋಗ್ಯ ಸಹಾಯವಾಣಿ ಮೂಲಕ ಹೆಚ್ಚಿನ ಮಾಹಿತಿ ಪಡೆದು ಕೊಳ್ಳಬಹುದು ಎಂದು ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಮಾತನಾಡಿ ಮಕ್ಕಳಿಗೆ ನ್ಯೂಟ್ರಿಷನ್ ಸಮಸ್ಯೆ ಮತ್ತು ಪರೀಕ್ಷಾ ಸಮಯದಲ್ಲಿ ಒತ್ತಡದಿಂದ ಉಂಟಾಗು ತೊಂದರೆ ಕಾಣಿಕೊಂಡರೆ ಸ್ನೇಹಾ ಕ್ಲಿನಿಕ್ಗೆ ಕಳಿಕೊಡಿ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ದೇವಮ್ಮ,ಲಕ್ಷ್ಮಿ, ರಾಜೇಶ್ವರಿ, ವಿಜಯಲಕ್ಷ್ಮಿ, ಮಹಿಳೆಯರಾದ ದೊಡ್ಡ ಬಸಪ್ಪ,ಸುಂಕಮ್ಮ,ನಿರ್ಮಲ,ಅಂಬಮ್ಮ,ರೇಣುಕಾ,ವಸಂತ,ತಾರಮ್ಮ,ಹನುಮಕ್ಕ,ಭಾಗ್ಯಮ್ಮ,ಲಕ್ಷ್ಮಿ ಇತರರು ಹಾಜರಿದ್ದರು.