ಸಂಡೂರು: ಅ: 09: ತಾಲೂಕಿನ ವಡ್ಡು ಗ್ರಾಮದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ನಾನಾ ಬಗೆಯ ಮಾನಸಿಕ ಕಾಯಿಲೆಗಳು ಇದ್ದು, ಕೇವಲ ದೈಹಿಕ ಅರೋಗ್ಯವಲ್ಲದೇ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಿದೆ, ಶೇಕಡ ಹತ್ತರಷ್ಟು ಜನರು ಒಂದಲ್ಲೊಂದು ಮಾನಸಿಕ ತೊಂದರೆಯಿಂದ ಬಳಲುತ್ತಿರುತ್ತಾರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಉತ್ತಮ ಸಲಹೆ ನೀಡಿ ಸ್ವಾಲಂಭಿಗಳಾಗಿ ಉಪಯುಕ್ತ ಜೀವನ ನಡೆಸುವಂತೆ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು, 1992 ರಿಂದ ಪ್ರತಿ ವರ್ಷ ಅಕ್ಟೋಬರ್ 10 ರಂದು ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ,ತೀವ್ರ ಸ್ವರೂಪದ ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದು, ಮತ್ತು ಸಾಮಾನ್ಯ ಮಾನಸಿಕ ತೊಂದರೆ ಮೇನಿಯಾ,ಸ್ಕಿಜೋಫ್ರೇನಿಯಾ, ಗೀಳು, ದೇವರು, ದೆವ್ವ ಬಂದಂತೆ ವರ್ತಿಸುವವರಿಗೆ ಸಾಂತ್ವನ, ಮನೋ ಚಿಕಿತ್ಸೆ ನೀಡಬೇಕಾಗುತ್ತದೆ, ಉತ್ತಮ ಸ್ನೇಹಿತರ ಸಂಬಂಧ, ವ್ಯಾಯಾಮ, ದ್ಯಾನ, ಪ್ರಕೃತಿಯೊಂದಿಗೆ ಮನಸ್ಸನ್ನು ಉತ್ತಮ ಸುಸ್ಥಿರವಾಗಿಟ್ಟುಕೊಳ್ಳುವುದರಿಂದ ಮತ್ತು ಮಾದಕ ವ್ಯಸನ, ಮದ್ಯಪಾನ, ಧೂಮಪಾನಗಳನ್ನು ತ್ಯಜಿಸುವುದರಿಂದ ಸಂಪೂರ್ಣ ಆರೋಗ್ಯವಂತರಾಗಿರ ಬಹುದು ಎಂದು ತಿಳಿಸಿದರು, ಮಕ್ಕಳಲ್ಲಿ ಅವರ ಸಾಮರ್ಥ್ಯ ಗುರುತಿಸಿ ಜೀವನ ಕೌಶಲ್ಯಗಳ ಬಗ್ಗೆ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗುಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು,
ಹಾಗೆ ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ಎರಡನೇ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮದಡಿ ತಜ್ಞರು ಅಗಮಿಸಿ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ, ಸಲಹೆ ನೀಡುವರು ಇದನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು, 104 ಆರೋಗ್ಯ ಸಹಾಯವಾಣಿ ಮೂಲಕ ಹೆಚ್ಚಿನ ಮಾಹಿತಿ ಪಡೆದು ಕೊಳ್ಳಬಹುದು ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಮಾನಸಿಕ ಸಾಮಾರ್ಥ್ಯ ಬೆಳೆಸುವ ಮತ್ತು ಒತ್ತಡವನ್ನು ನಿಯಂತ್ರಿಸುವ ಚಟುವಟಿಕೆಗಳನ್ನು ಆಸ್ಪೈರ್ ನ ಲೈಫ್ ಸ್ಕಿಲ್ ಎಜುಕೇಟರ್ ವೀರೇಶ್ ಮತ್ತು ಮೌನೇಶ್ವರಿ,ವೀಣಾ, ಸಂಧ್ಯಾ,ಅಕ್ಷಯ್, ಪೂಜಾ ನಡೆಸಿಕೊಟ್ಟರು,
ಈ ಸಂದರ್ಭದಲ್ಲಿ ವಡ್ಡು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ.ಎಸ್ ಕೊಮಾರಪ್ಪ, ಹನುಮಂತಪ್ಪ,ಬಸಪ್ಪ, ಪಕ್ರುಸಾಬ್,ಗಾದಿಲಿಂಗಪ್ಪ, ದೊಡ್ಡ ಸ್ವಾಮಿ, ಅಗಸರ ಅಳ್ಳಯ್ಯ,ಹುಸೇನ್ ಸಾಬ್,ಯಲ್ಲಮ್ಮ,ವೀರೇಶಪ್ಪ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಅರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್,ಸಮುದಾಯ ಆರೋಗ್ಯ ಅಧಿಕಾರಿ ವಿಜಯಲಕ್ಷ್ಮಿ, ಆಶಾ ಕಾರ್ಯಕರ್ತೆ ಶಿವಲೀಲಾ,ಮಂಜುಳಾ,ಹಂಪಮ್ಮ ಇತರರು ಹಾಜರಿದ್ದರು.