ಸಂಡೂರು: ನ: 13: ತಾಲೂಕಿನ ತೋರಣಗಲ್ಲು ಗ್ರಾಮದ ಒಂದನೇ ಅಂಗನವಾಡಿಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ “ವಿಶ್ವ ನ್ಯುಮೋನಿಯಾ ದಿನಾಚರಣೆ”ಯನ್ನು ಆಚರಿಸಲಾಯಿತು, ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಐದು ವರ್ಷದೊಳಗಿನ ಮಕ್ಕಳಲ್ಲಿ ಸಹಜವಾಗಿ ಕಾಡುವ ಎರಡು ಕಾಯಿಲೆಗಳಲ್ಲಿ ನ್ಯುಮೋನಿಯಾವೂ ಒಂದಾಗಿದ್ದು, ನ್ಯುಮೋನಿಯಾ ಕಾಯಿಲೆ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗೈಗಳ ಮೂಲಕ ಉಂಟಾಗುತ್ತದೆ, ಸೂಕ್ತ ಆರೈಕೆ ಮತ್ತು ಸೂಕ್ತ ಚಿಕಿತ್ಸೆಯಿಂದ ನ್ಯುಮೋನಿಯಾ ತೊಂದರೆಗಳನ್ನು ಕಡಿಮೆಮಾಡಿ, ನ್ಯುಮೋನಿಯಾದಿಂದ ಮಕ್ಕಳ ಮರಣಗಳನ್ನು ತಡೆಗಟ್ಟಬಹುದು, ಆರು ತಿಂಗಳ ವರೆಗೆ ಸರಿಯಾದ ರೀತಿಯಲ್ಲಿ ಶಿಶುಗಳಿಗೆ ತಾಯಿಯ ಎದೆ ಹಾಲು ಮಾತ್ರವೇ ಕೊಡುವುದರ ಮೂಲಕ ಸಾಕಷ್ಟು ಪ್ರಮಾಣದಲ್ಲಿ ನ್ಯುಮೋನಿಯಾವನ್ನು ತಡೆಯಬಹುದು, ನ್ಯುಮೋನಿಯಾದಿಂದ ಶಿಶುಗಳನ್ನು ರಕ್ಷಿಸಲು ಲಘು ಉಷ್ಣತೆಯಿಂದ ಬೆಚ್ಚಗಿಡಬೇಕು, ಉಸಿರಾಟಕ್ಕೆ ತೊಂದರೆಯಾಗುವ ಹೊಗೆ ರಹಿತ ಕೋಣೆ ಇಡಬೇಕು,ಶಿಶುಗಳಿಗೆ ಸಾಮ್ರಾಣಿ ಹೊಗೆ ಹಾಕುವುದು ಬಿಡಬೇಕು, ಶಿಶು ಬೆಚ್ಚಗಿರಲು ಕಾಂಗೊರೋ ಕೇರ್ ನಲ್ಲಿ ಇಡಬೇಕು ತಾಯಿಯ ಚರ್ಮದ ಉಷ್ಣತೆಗೆ ಹೊಂದಿಕೊಳ್ಳುವ ಹಾಗೆ ಬಿಸಿಯಾಗಿ ಇಡಬೇಕು, ನ್ಯುಮೋನಿಯಾ ಸೋಂಕಿನ ಲಕ್ಷಣಗಳು ಕಂಡಕೂಡಲೇ ವೈದ್ಯರ ಬಳಿ ತಪಾಸಣೆಗೆ ಒಳಪಡಿಸಬೇಕು, ನ್ಯುಮೋನಿಯಾ ದಿಂದ ಉಂಟಾಗುವ ಸಾವುಗಳನ್ನು ಮೂರಕ್ಕೆ ಇಳಿಸುವ ಗುರಿಯನ್ನು ಇಟ್ಟುಕೊಂಡು ನ್ಯುಮೋನಿಯಾ ತಟಸ್ಥ ಗೊಳಿಸಲು ಜಾಗೃತಿ ಮೂಡಿಸಲಾಗುವುದು,ಮತ್ತು ತಡೆಗಟ್ಟುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮಾಡಿದಲ್ಲಿ ನ್ಯುಮೋನಿಯಾ ತಡೆಗಟ್ಟುಬಹುದು ಎಂದು ತಿಳಿಸಿದರು,ದೇಹಕ್ಕೆ ಪ್ರೋಟೀನ್ ಗಳ ಅವಶ್ಯಕತೆ ಇದ್ದು ಬೇಳೆಕಾಳುಗಳನ್ನು ನಿತ್ಯ ಬಳಸಲು ಸೂಚಿಸಲಾಯಿತು, ತಾಯಂದಿರು ಮತ್ತು ಮಕ್ಕಳು ಮೊಳಕೆ ಬರಿಸಿದ ಕಾಳುಗಳನ್ನು ನಿತ್ಯ ಸೇವಿಸಲು ಸಲಹೆ ನೀಡಲಾಯಿತು,
ಕಾರ್ಯಕ್ರಮವನ್ನು ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ನಡೆಸಿಕೊಟ್ಟರು,
ಈ ಸಂದರ್ಭದಲ್ಲಿ ಹಿರಿಯ ಮಹಿಳೆಯರಾದ ದೇವಮ್ಮ,ಸೋಮಕ್ಕ, ಅಂಗನವಾಡಿ ಕಾರ್ಯಕರ್ತೆ ಸ್ವಾತಿ,ಸುಮಾ, ಮಹಿಳೆಯರಾದ ವೀಣಾ,ಕುಂತಿದೇವಿ, ಸವಿತಾ, ಅರುಣಾ,ಶಾಹೀನ್ಬೇಗಂ,ಕೌಶಲ್ಯ, ಗೀತಾ ಅನಸೂಯಾ, ದಿಲ್ಶಾದಾ ಇತರರು ಉಪಸ್ಥಿತರಿದ್ದರು.