ಮತದಾರರಲ್ಲಿ ಜಾಗೃತಿ ಮೂಡಿಸಲು “ಓಟರ್ಸ್ ಕಪ್” ಕ್ರಿಕೆಟ್ ಪಂದ್ಯಾವಳಿ

0
27

ಲೋಕಸಭೆ ಚುನಾವಣೆ -2024ರ ಪ್ರಯುಕ್ತ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಮಿತ್ತ ಇಂದು ಸರ್ಕಾರಿ ಪ್ರೌಢ ಶಾಲೆ ಎಪಿಎಂಸಿ ಸಂಡೂರು ಇಲ್ಲಿ “ಓಟರ್ಸ್ ಕಪ್” ನಡೆಸಲಾಯಿತು.

ಸಂಡೂರು ತಾಲೂಕಿನ ಸಹಾಯಕ ಚುನಾವಣೆ ಅಧಿಕಾರಿ ಶ್ರೀ ಸತೀಶ್ ಕೆ ಹೆಚ್ ಇವರು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ತಹಸಿಲ್ದಾರರಾದ ಶ್ರೀ ಅನಿಲ್ ಕುಮಾರ್ ಜೆ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀ ಎಚ್. ಷಡಕ್ಷರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಡಾ. ಐ. ಆರ್. ಅಕ್ಕಿ, ದೈಹಿಕ ಶಿಕ್ಷಣ ಪರೀಕ್ಷಕರಾದ ಶ್ರೀ ಪ್ರಭುದೇವಯ್ಯ, ಶಿಕ್ಷಣ ಸಂಯೋಜಕರಾದ ಬಸವರಾಜ ಸಿ, ಸಂಡೂರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಪರಶುರಾಮಪ್ಪ ಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ತಮ್ಮಪ್ಪ ಎಲ್ಎಚ್ ತಾಲೂಕು ಸ್ವೀಟ್ ನೋಡಲ್ ಅಧಿಕಾರಿಗಳಾದ ಕೊಟ್ರೇಶ್ ಜಿ ಹಾಗೂ ಆಟಗಾರರು ಉಪಸ್ಥಿತರಿದ್ದರು.

ಸದರಿ ಕ್ರೀಡಾಕೂಟದಲ್ಲಿ ಎಂಟು ತಂಡಗಳು ನೋಂದಣಿ ಮಾಡಿಕೊಂಡಿದ್ದು, ಪ್ರಥಮ ಬಹುಮಾನವನ್ನು ಡಿ.ಇ.ಓ ಸಂಡೂರು ತಂಡ ಆಕರ್ಷಕ ಕಪ್ ಹಾಗೂ 2500ರೂ ನಗದು ರೂಪದಲ್ಲಿ ಪಡೆದರು. ದ್ವಿತೀಯ ಬಹುಮಾನವನ್ನು GPT ಶಿಕ್ಷಕರ ತಂಡದವರು ಆಕರ್ಷಕ ಕಪ್ ಹಾಗೂ 1500ರೂ ನಗದು ರೂಪದಲ್ಲಿ ಪಡೆದರು.
ಮ್ಯಾನ್ ಆಫ್ ದಿ ಸೀರೀಸ್ ಬಹುಮಾನವನ್ನು ಖಾಜಾ ಸಂಡೂರು ರವರು ಗಳಿಸಿದರು.

ಸದರಿ ಸಂದರ್ಭದಲ್ಲಿ ಹಾಜರಾದ ಎಲ್ಲಾ ಕ್ರೀಡಾಪಟುಗಳಿಗೆ ತಾವುಗಳು ಕಡ್ಡಾಯವಾಗಿ ಚುನಾವಣೆಯಲ್ಲಿ ಮತವನ್ನು ಚಲಾಯಿಸಬೇಕು ಹಾಗೂ ತಮ್ಮ ಸುತ್ತಮುತ್ತಲಿನ ಎಲ್ಲಾ ಮತದಾರರನ್ನು ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ಪ್ರೇರೇಪಿಸಬೇಕೆಂದು ತಿಳಿಸಲಾಯಿತು.

ಸಹಿ ಸಂಗ್ರಹಣೆ, ಸೆಲ್ಫಿ ಭೂತ್ ಗಳಲ್ಲಿ ಭಾವಚಿತ್ರಗಳನ್ನು ತೆಗೆಸಿಕೊಳ್ಳುವುದರ ಮೂಲಕ ಯುವಕರು ನಮ್ಮ ದೇಶದ ಚುನಾವಣೆ ನಮ್ಮ ಹೆಮ್ಮೆ ಎಂದು ಸಾರಿದರು.

ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು, ಸ್ವೀಪ್ ಸಮಿತಿ ವತಿಯಿಂದ ಯುವಕರಿಗೆ ಪ್ರೋತ್ಸಾಹವನ್ನು ನೀಡಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here