ನರೇಗಾದಲ್ಲಿ ಉತ್ತಮ ಸೇವೆ:ಸನ್ಮಾನ ಸ್ವೀಕರಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ

0
92

ಬಳ್ಳಾರಿ,ಫೆ.10:ಬಳ್ಳಾರಿ ಜಿಪಂ ವತಿಯಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಉದ್ಯೋಗ ಖಾತರಿ ಯೋಜನೆಯ 2020-21ರ ಜಿಲ್ಲಾಮಟ್ಟದ ನರೇಗಾ ದಿನಾಚರಣೆ ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿ ಅಭಿನಂದಿಸಲಾಯಿತು. ಜಿಪಂ ಸಿಇಒ ಕೆ.ಆರ್.ನಂದಿನಿ ಹಾಗೂ ಇತರ ಗಣ್ಯರು ಉತ್ತಮ ಸಾಧನೆ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಿ ಶುಭಹಾರೈಸಿದರು.
ಸನ್ಮಾನ ಸ್ವೀಕರಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿವರ ಇಂತಿದೆ: ಸಂಗನಕಲ್ಲು ಗ್ರಾ.ಪಂ.ನ ಡಾಟಾ ಎಂಟ್ರಿ ಆಪರೇಟರ್ ನಳಿನಾಕ್ಷಿ, ಹ್ಯಾರಡ ಗ್ರಾ.ಪಂ.ನ ಡಾಟಾ ಎಂಟ್ರಿ ಆಪರೇಟರ್ ಎಲ್ಲಪ್ಪ ಬಿದರಹಳ್ಳಿ, ಬೆಳಘಟ್ಟ ಗ್ರಾ.ಪಂ.ನ ಡಾಟಾ ಎಂಟ್ರಿ ಆಪರೇಟರ್ ನರಸಿಂಹ, ಸಿರುಗುಪ್ಪ ತಾಲ್ಲೂಕಿನ ಬಿ.ಎಫ್.ಟಿ. ಶಿವರಾಜ.ಟಿ, ಹಡಗಲಿ ತಾಲ್ಲೂಕಿನ ಬಿ.ಎಫ್.ಟಿ. ಕೊಟ್ರೇಶ ಜೆ.ಕೆ, ಹರಗಿಬೊಮ್ಮನಹಳ್ಳಿಯ ಬಿ.ಎಫ್.ಟಿ. ದೊಡ್ಡಬಸಪ್ಪ, ಬೆಳಘಟ್ಟ ಗ್ರಾ.ಪಂ.ನ ಕಾ.ಬ. ಜಯಣ್ಣ, ಕುರುವಳ್ಳಿ ಗ್ರಾ.ಪಂ.ನ ಕಾ.ಬ. ಅಂಬಮ್ಮ, ಬ್ಯಾಸಿಗದೇರಿ ಗ್ರಾ.ಪಂ.ನ ಕಾ.ಬ. ಇಸ್ಮಾಯಿಲ್, ಹಗರಿಬೊಮ್ಮನಹಳ್ಳಿ ತಾಂತ್ರಿಕ ಸಂಯೋಜಕ ಡಿ.ದೇವೇಂದ್ರ ನಾಯ್ಕ್, ಬಳ್ಳಾರಿ ತಾಲೂಕು ಎಮ್‍ಐ.ಎಸ್ ಸಂಯೋಜಕ ಶೇಖರ್ ರೆಡ್ಡಿ, ಹಗರಿಬೊಮ್ಮನಹಳ್ಳಿ ತಾಲೂಕು ಎಮ್,ಐ.ಎಸ್ ಸಂಯೋಜಕ ಆರ್.ಪ್ರಕಾಶ್ ನಾಯ್ಕ್, ಬಳ್ಳಾರಿ ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ, ಹಡಗಲಿ ತಾಂತ್ರಿಕ ಸಹಾಯಕ ಜಿ.ಬಸವರಾಜ, ಹಗರಿಬೊಮ್ಮನಹಳ್ಲಿ ತಾಂತ್ರಿಕ ಸಹಾಯಕ ಗಣೇಶ್ ಹೆಚ್.ಕೆ., ಬಳ್ಳಾರಿ ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ದೊಡ್ಡ ನಾಯಕ, ಹಗರಿಬೊಮ್ಮನಹಳ್ಳಿ ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ಕಾಂತರಾಜ್, ಬಳ್ಳಾರಿ ಸಾಮಾಜಿಕ ಅರಣ್ಯದ ತಾಂತ್ರಿಕ ಸಹಾಯಕ ನೇತ್ರಾವತಿ, ಬಳ್ಳಾರಿ ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಸುಧೀರ್, ಹಗರಿಬೊಮ್ಮನಹಳ್ಳಿ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜಾರಿ, ಹಡಗಲಿ ಸಹಾಯಕ ನಿರ್ದೇಶಕ(ನರೇಗಾ) ಯು.ಸೋಮಶೇಖರ್, ಹಗರಿಬೊಮ್ಮನಹಳ್ಳಿ ಕೃಷಿ ಸಹಾಯಕ ನಿರ್ದೇಶಕ ಜೀವನ್ ಸಾಬ್, ಬಳ್ಳಾರಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಹೆಚ್.ಶಶಿಕಾಂತ್, ಹಡಗಲಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಕಲ್ಲಮ್ಮನವರ್, ಹಗರಿಬೊಮ್ಮನಹಳ್ಳಿ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಜಿ.ಪರಮೇಶ್ವರ, ಹೊಳಗುಂದಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಪರಮೇಶ್ವರಪ್ಪ ಜಿ.ಎಸ್, ಬೆಳಘಟ್ಟ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ, ಅಲಬೂರು ಪಂಚಾಯತ ಅಭಿವೃದ್ಧಿ ಅಧಿಕಾರಿ ಮಾಧವಿ, ಹಡಗಲಿ ಸಹಾಯಕ ಕೃಷಿ ಅಧಿಕಾರಿ ತವನಪ್ಪ,
ಹಡಗಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಯು.ಹೆಚ್, ಸಂಗನಕಲ್ಲು ಪಿಡಿಒ ಪರಶುರಾಮ ಸಿ., ಬಾದನಹಟ್ಟಿ ಪಿಡಿಒ ಜಯಲಕ್ಷ್ಮಿ ಜಿ.,ಮಾಲವಿ ಪಿಡಿಒ ಮಂಜುನಾಥ, ಗುಡೇಕೋಟೆ ಪಿಡಿಒ ಮಂಜನಾಯ್ಕ್, ನಾಗರಕಟ್ಟೆ ಪಿಡಿಒ ತಸ್ಲಿಮ್ ಬಾನು ಎಸ್., ಕೊಂಚಿಗೇರಿ ವಿರೇಶ ಎಸ್., ಮೇಟ್ರಿ ಪಿಡಿಒ ವಾಸುಕಿ ಎಂ., ನೀಲಗುಂದ ಪಿಡಿಒ ಆನಂದ್‍ಕುಮಾರ್ ಆರ್.ಬಿ, ಚಿಲಕನಕಟ್ಟಿ ಪಿಡಿಒ ಮಂಜುಳಾ, ದರೋಜಿ ಪಿಡಿಒ ಹನುಮಂತಪ್ಪ, ಹೊಳಗುಂದಿ ಪಿಡಿಒ ಪರಮೇಶ್ ಜಿ.ಎಸ್.

LEAVE A REPLY

Please enter your comment!
Please enter your name here