ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಇಂಟರ್ ಡಿಪಾರ್ಟ್ಮೆಂಟ್ ಕ್ರಿಕೆಟ್ ಪಂದ್ಯಾವಳಿ

0
139

ಸಂಡೂರು:ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಜರುಗಿದ ಇಂಟರ್ ಡಿಪಾರ್ಟ್ಮೆಂಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರ್ಥಶಾಸ್ತ್ರ ವಿಭಾಗದವರು ಪ್ರಥಮ ಸ್ಥಾನ ವಿಭಾಗ. ದ್ವಿತೀಯ ಸ್ಥಾನವನ್ನು ವಾಣಿಜ್ಯ ವಿಭಾಗತಂಡ, ಫೇರ್ ಪ್ಲೇ ಪ್ರಶಸ್ತಿ m-tech ಪಡೆದುಕೊಂಡಿತು.

ಉತ್ತಮ ಬೌಲರ್ ಪ್ರಶಸ್ತಿಯನ್ನು ಲಕ್ಷ್ಮಣ ಗಾಯಕವಾಡ, ಉತ್ತಮ ಬ್ಯಾಟ್ಸ್ಮನ್ ಆಗಿ ಪ್ರಕಾಶ್ ರೆಡ್ಡಿ, ಆಲ್-ರೌಂಡರ್ ಪ್ರಶಸ್ತಿಯನ್ನು ರಾಘವೇಂದ್ರ ಪಡೆದುಕೊಂಡರು.

ಮಹಿಳೆಯರ ತ್ರೋಬಾಲ್l ಪಂದ್ಯಾವಳಿಯಲ್ಲಿ ವಾಣಿಜ್ಯ ವಿಭಾಗ ಪ್ರಥಮಸ್ಥಾನ,ಅರ್ಥಶಾಸ್ತ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಕೇಂದ್ರದ ನಿರ್ದೇಶಕ ಡಾ.ಬಿ.ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮ ರಾಗಿ ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಎಂ.ಡಿ ಕಣದಾಳಿ,ಡಾ.ನಾಯಕರ ಹೊನ್ನೂರ್ ಸ್ವಾಮಿ, ಡಾ. ಶರತ್, ಡಾ ಮುಬಾರಕ್, ಡಾ.ಚೌಡಪ್ಪ .ಡಾ.ನಾಗರಾಜ್ ರಮೇಶ್ ರಾಯಚೂರ, ಡಾ.ಮಹೇಶ್,
ಡಾ. ಮಲ್ಲಯ್ಯ, ಡಾ.ಗುಡ್ಡಪ್ಪ ಇತರರಿದ್ದರು. ಪಾಪಯ್ಯ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here