ಸಂಡೂರು; ಬೇಸಿಗೆಕಾಲ ಶುರುವಾಗಿ ಹಲವು ದಿನಗಳಾಗಿವೆ, ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಇಂತಹದೊಂದು ವಿಶಿಷ್ಟ ಕಾರ್ಯವನ್ನು ಭುವನೇಶ್ವರಿ ದೇವಸ್ಥಾನದಿಂದ ತಿಮ್ಮಪ್ಪ ಗುಡಿ ಮೈನ್ಸ್ ವರೆಗೆ
ತಾಲೂಕಿನ ಚಾಲಕರ ಟ್ರೇಡ್ ಯೂನಿಯನ್ ತಂಡ ಮಾಡಿದೆ,ಯೂನಿಯನ್ ನ ಅಧ್ಯಕ್ಷ ಬಸವರಾಜ್ ಎಸ್ ಆರ್ ಪಿ ಅವರ ಮುಂದಾಳತ್ವದಲ್ಲಿ ಈ ಯಶಸ್ವಿಯಾಗಿದೆ,ಆ ತಂಡದ ಸದಸ್ಯರು ಮಾಡಿದ್ದು ಇಷ್ಟೇ….
ಮನೆಯಿಂದ ತಂದ ಅಕ್ಕಿ, ಗೋಧಿ, ರಾಗಿ, ಕಾಳುಗಳನ್ನು ಹಾಕಲಾಯಿತು,
ಅಲ್ಲಲ್ಲಿ ಕುಡಿಯುವ ನೀರಿಗೂ ತೊಟ್ಟಿ ನಿರ್ಮಿಸಲಾಯಿತು, ಮತ್ತೆ ಕೆಲವು ಗಿಡಗಳಲ್ಲಿಯೇ ನೀರಿನ ವ್ಯವಸ್ಥೆಯನ್ನೂ ಮಾಡಲಾಯಿತು,
ಇದರ ಜೊತೆ ಪ್ಲಾಸ್ಟಿಕ್ ಹಾಳೆ ಬಳಸಿ ಕಾಡಿನಲ್ಲಿ ಸಣ್ಣ ಹೊಂಡ ನಿರ್ಮಿಸಲಾಯಿತು,
ಅದರಲ್ಲಿ ನೀರು ತುಂಬಿಸಿಲಾಯಿತು,ಇದು ಹಲವು ಪ್ರಾಣಿಗಳ ದಾಹ ತಣಿಸುತ್ತಿದೆ,ಮುಂಗುಸಿ ಮತ್ತಿತರ ಪ್ರಾಣಿಗಳು ನೀರು ಕುಡಿಯಲು ಇಲ್ಲಿಗೆ ಬರುತ್ತಿರುವುದು ಗಮನ ಸೆಳೆಯುತ್ತದೆ.
‘ವಾರದ ಒಂದು ದಿನ ಈ ಜೀವಿಗಳಿಗೆ ಮೀಸಲಿಟ್ಟರೆ ನೆಮ್ಮದಿ ಸಿಗುತ್ತದೆ.
ಅವುಗಳ ಮೂಲಕ ಪರಿಸರದ ಜೊತೆ ಭಾವನಾತ್ಮಕ ಸಂಬಂಧ ಬೆಸೆಯುತ್ತದೆ.
ಮನುಷ್ಯರಾಗಿದ್ದಕ್ಕೂ ಸಾರ್ಥಕವಾಗುತ್ತದೆ.
ನನ್ನ ಜೊತೆ ಬಾಗಿಯಾಗಿ ಕೈ ಜೊಡಿಸಿದ
ಚಾಲಕ ಮಿತ್ರರಾದ
ಮಂಜುನಾಥ ಗೌಳೆರ
ಶಾಂತಣ್ಣ
ನಾಗರಾಜ ಲಕ್ಷ್ಮಿಪುರ
ಮಂಜುನಾಥ ಜೈಸಿಂಗಪುರ
ಪಕ್ರುಸಾಭ ದೌಲಥಪುರ
ಪ್ರದಿಪ
ದಾದು
ಬಸವರಾಜ್ ಎಸ್ ಅರ್ ಪಿ
ಅಧ್ಯಕ್ಷರು
ನಮ್ಮ ಚಾಲಕರ ಟ್ರೆಡ್ ಯೂನಿಯನ್
ಸಂಡೂರು ಘಟಕ
ಸಂಡೂರು