ಭಾರತೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಕಲ್ಯಾಣ ಕರ್ನಾಟಕ ಮಹಿಳಾ ಘಟಕ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ ನವಜೀವನ ವೃದ್ಧಾಶ್ರಮ ಗಂಗಾವತಿಯಲ್ಲಿ ಆಚರಿಸಲಾಯಿತು.
ವೃದ್ಧರಿಗೆ ಹಣ್ಣು ಬಿಸ್ಕತ್ ಕೊಡುವುದರ ಮೂಲಕ ಆಚರಿಸಲಾಯಿತು
ಈ ಕಾರ್ಯಕ್ರಮ ಉದ್ದೇಶಿಸಿ ಭಾರತೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಮಹಿಳಾ ಘಟಕ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಡಾಕ್ಟರ್ ಆರ್ ಈರಮ್ಮ ಅವರು ಮಾತನಾಡಿ..ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರಿಗೆ ಅಪಾರವಾದ ಕೊಡುಗೆಗಳನ್ನು ನೀಡಿರುತ್ತಾರೆ ಹಾಗೆ ಮಹಿಳೆಯರಿಗೆ ಹಲವಾರು ರೀತಿಯ ಹಕ್ಕುಗಳನ್ನು ನೀಡಿರುತ್ತಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು .
ಈ ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಅಧಿಕಾರಿಗಳು ಹಾಗೂ ಭೀಮವಾದದ ಸಂಚಾಲಕರು ಸಹಸಂಚಾಲಕರು ಭಾಗವಹಿಸಿದ್ದರು ಗಂಗಾವತಿ ತಾಲ್ಲೂಕಿನ ತಾರ ಬಾನೋ ರೇಖಾ ಮೈಬೂಬಿ ಇತರರು ಭಾಗವಹಿಸಿದ್ದರು .