ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಇತ್ತೀಚಿಗೆ ರಚಿಸಿದ ರೈತರ ಹಾಗೂ ಕೃಷಿ ಕುಂದುಕೊರತೆಯ ಅಧ್ಯಯನ ಸಮಿತಿಯಲ್ಲಿ ಮಾಜಿ ಶಾಸಕ, ಕೆಪಿಸಿಸಿ ರಾಜ್ಯ ವಕ್ತಾರ, ಸಂಡೂರುನ ಸಿರಾಜ್ ಶೇಖ್ ಅವರು ಸಂಯೋಜಕರಾಗಿ ನೇಮಕಗೊಂಡಿದ್ದಾರೆ
ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಮಿತಿ ಸಭೆ ಬಳಿಕ ಡಿಕೆ. ಶಿವಕುಮಾರ್ ಅವರು 26.06.2021 ರಂದು ಆದೇಶ ಹೊರಡಿಸಿದ್ದಾರೆ
ಈ ಸಮಿತಿ ರೈತರ ಪರಿಸ್ಥಿತಿ ಮತ್ತು ಸರ್ಕಾರದ ವರ್ತನೆಯನ್ನು ಗಮನದಲ್ಲಿಟ್ಟುಕೊಂಡು ರೈತರ ಸಮಸ್ಯೆಗಳನ್ನು ಪರಿಶೀಲಿಸಿ ರೈತರ ಪರವಾಗಿ ಸಲಹೆಗಳನ್ನು ಹಾಗೂ ಪರಿಹಾರೋಪಾಯಗಳನ್ನು ವರದಿ ಸಲ್ಲಿಸಿದೆ.