ತೋರಣಗಲ್ಲು ಆಯುಷ್ ವೈದ್ಯಾರಾದ ಡಾ.ಪರನಾಜ್ ಅಹಮದ್ ಅವರಿಗೆ ಸನ್ಮಾನ,ಹಾಗೂ ಬೀಳ್ಕೊಡಿಗೆ ಸಮಾರಂಭ

0
106

ತೋರಣಗಲ್ಲುನಲ್ಲಿ ದಿ.01.07 2021 ರಂದು ವೈದ್ಯರ ದಿನಾಚರಣೆಯನ್ನು ಆಚರಿಸಿ ಅವರ ಸೇವೆಯನ್ನು ಕೊಂಡಾಡಿ ನಮ್ಮೆಲ್ಲರ ಆರೋಗ್ಯ ರಕ್ಷಣೆ ಮಾಡುತ್ತಿರುವುದಕ್ಕೆ ಅವರಿಗೆ ಗುಲಾಬಿ ಹೂ ಕೊಟ್ಟು ಕೃತಜ್ಞತೆ ಸಲ್ಲಿಸಲಾಯಿತು,

ಇತ್ತೀಚಿಗೆ ಸರ್ಕಾರದ ಆದೇಶದಂತೆ ಎಮ್.ಬಿ.ಬಿ.ಎಸ್ ಮುಗಿಸಿದ ವೈದ್ಯರಿಗೆ ಗ್ರಾಮಾಂತರ ಸೇವೆ ಕಡ್ಡಾಯ ಮಾಡಿದ ಕಾರಣ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಕ್ಕೆ ನಮ್ಮ ಕೇಂದ್ರದ ಆಯುಷ್ ವೈದ್ಯರಾದ ಡಾ.ಫರನಾಜ್ ಅಹಮದ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿತ್ತು

ನಾಲ್ಕು ವರ್ಷದಿಂದ ಅವರು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದರು ಅವರ ಸೇವೆಗೆ ಸನ್ಮಾನ ಮಾಡಿ ಪ್ರಶಂಸಾ ಪ್ರಮಾಣ ಪತ್ರ ನೀಡಿ ಗೌರವ ಸಲ್ಲಿಸಿ ಅವರನ್ನು ಬಿಳ್ಕೊಡಲಾಯಿತು

ಈ ಸಂದರ್ಭದಲ್ಲಿ ಡಾ.ಗೋಪಾಲ್ ರಾವ್, ಡಾ.ಫರನಾಜ್ ಅಹಮದ್,ಡಾ.ದೀಪಾ ಪಾಟಿಲ್, ಡಾ. ಆಯಿಷಾ, ಹಾಗೂ ಡಾ.ವೆಂಕಟೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮಂಜುನಾಥ್,ಶಕೀಲ್ ಅಹಮದ್, ಶಶಿಧರ,ಲಕ್ಷ್ಮಿ, ರೂಪಾ, ಹುಲಿಗೆಮ್ಮ, ಚಲುವರಾಜ, ಶಿವರಾಜ್, ತಿಪ್ಪೇಸ್ವಾಮಿ, ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here