ಕೊರೊನಾ ಟೆಸ್ಟ್ ಗೆ ಹಣ ಪಡೆದಿರುವ ಸಿಬ್ಬಂದಿ,ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಡಿವೈಎಫ್ಐ ಪ್ರತಿಭಟನೆ.

0
230

ಹಾಯ್ ಸಂಡೂರ್-ನ್ಯೂಸ್. ಸಂಡೂರು;ಜುಲೈ.10.ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಟೆಸ್ಟ್ ಗೆ ಹಣ ಪಡೆದಿರುವ ಸಿಬ್ಬಂದಿಗಳು, ಅದಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಹಾಗೂ ಲಂಚ ಪ್ರಕರಣವನ್ನು ತನಿಖೆಗೊಳಪಡಿಸಿ ಭಾಗಿಯಾಗಿರುವ ಭ್ರಷ್ಟರನ್ನು ಅಮಾನತು ಮಾಡುವಂತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿ ಇಂದು ತೋರಣಗಲ್ಲು ಸಮುದಾಯ ಆರೋಗ್ಯ ಕೆಂದ್ರದ ಮುಂದೆ DYFI ಸಂಡೂರು ತಾಲ್ಲೂಕು ಸಮಿತಿ ಯಿಂದ ಪ್ರತಿಭಟಿಸಿ ತಾಲೂಕು ಆರೋಗ್ಯ ಅಧಿಕಾರಿ ಗೋಪಾಲ್ ರಾವ್ ಅವರ ಮುಖಾಂತರ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎಸ್ ಕಾಲುಬಾ, ತಾಲೂಕು ಕಾರ್ಯದರ್ಶಿ ಎಚ್ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಅರ್ಜುನ್, ಲಂಚ ಸ್ವೀಕರಿಸುತ್ತಿದ್ದ ಭ್ರಷ್ಟ ಅಧಿಕಾರಿಗಳನ್ನು ತಮ್ಮ ಕ್ಯಾಮೆರಾ ಮೂಲಕ ಸೆರೆ ಹಿಡಿದ ಜಿಲ್ಲಾ ನಾಯಕರಾದ ಈರಣ್ಣ ಹಾಗು ಶೇಕ್ಷಾ, ಮತ್ತು ತಾಲೂಕು ಮುಖಂಡರಾದ ವೇಬಾಕುಮಾರಿ, ಎ. ಸ್ವಾಮಿ,ಮೈನು,
ಯು.ತಿಪ್ಪೇಸ್ವಾಮಿ, ಕೆ. ರಮೇಶ್, ಭಾಗವಹಿಸಿ ಯಶಸ್ವಿಗೊಳಿಸಿದರು. ಈ ಸಂಭಂದ ಕೂಡಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಮ್ಮುಖದಲ್ಲಿ ಡಿ.ವೈ.ಎಫ್.ಐ ನಿಯೋಗವನ್ನು ಕರೆಸಿ ಸಭೆ ಕರೆಯಬೇಕೆಂದು ಒತ್ತಾಯಿಸಲಾಯಿತು.

LEAVE A REPLY

Please enter your comment!
Please enter your name here