ಕೊಟ್ಟೂರು ಹಸಿರು ಹೊನಲು ಸೇವಾ ಸಂಸ್ಥೆಗೆ ನೂತನ ಸದಸ್ಯರ ಪದಗ್ರಹಣ

0
201

ವರದಿ:-ಶಿವರಾಜ್ ಕನ್ನಡಿಗ

ಹಾಯ್ ಸಂಡೂರ್. ನ್ಯೂಸ್
ಕೊಟ್ಟೂರು.ಜುಲೈ.18.ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಪದಗ್ರಹ ಸಮಾರಂಭ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು

ಈ ಸಂದರ್ಭದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ತಂಡಕ್ಕೆ ನೂತನ 09 ಸದಸ್ಯರು ಪದಗ್ರಹಣ ಮಾಡಿದರು

ಸಚಿನ್.ಮಲ್ಲಪ್ಪ. ಅರವಿಂದ್. ಗಿರೀಶ್. ರಾಜೇಶ್ ಕರ್ವ. ಯಲ್ಲಪ್ಪ. ಹೇಮಚಂದ್ರಪ್ಪ. ವಿಕ್ರಂ. ವೀರೇಶ್. ಸನ್ಮಾನಿಸುವ ಮೂಲಕ ಹಸಿರು ಹೊನಲು ಸೇವಾ ಸಂಸ್ಥೆಗೆ ಸದಸ್ಯರಾಗಿ ಸ್ವಾಗತ ಮಾಡಿಕೊಂಡರು

ನೂತನ 09 ಸದಸ್ಯರು ತಮ್ಮ ಹಸಿರು ಹೊನಲು ಸೇವಾ ಸಂಸ್ಥೆಗೆ ಸದಸ್ಯರನ್ನಾಗಿ ನೇಮಕ ಮಾಡಲಾಯಿತು ಸಾಮಾಜಿಕ ಕಳಕಳಿ ಹೊಂದಿರುವಂತಹ ಇವರುಗಳನ್ನು ಗುರುತಿಸಿ ಮುಂದಿನ ಪೀಳಿಗೆಗೆ ಸೇವಾ ಸಂಸ್ಥೆಗಳ ಏಳಿಗೆಗೆ , ಕೈಜೋಡಿಸಿದರು ಎಂದು ಈ ಸಂದರ್ಭದಲ್ಲಿ ಬಂಜಾರ ನಾಗರಾಜ್ ತಿಳಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅಂಚೆ ಕೊಟ್ರೇಶ್ ರವರು ಕೊಟ್ಟೂರಿನ ಸುತ್ತ ಮುತ್ತಲು ಸುಗಂಧ ಪರಿಮಳ ಹರಡಲಿಕ್ಕೆ ಈ ತಂಡವು ಅತ್ಯಂತ ಮಹತ್ವದ ಪಾತ್ರವಯಿಸಿದೆ

ಹಸಿರು ಹೊನಲು ಸೇವಾ ಸಂಸ್ಥೆಯು ಬೆಳೆದು ಬಂದಿದ್ದು ನಿಜಕ್ಕೂ ಅವಸ್ಮರಣೆವಾದದ್ದು ಈ ಸಂಸ್ಥೆಯು ಹೂ ಹರಳಿದ ಹಾಗೇ ಎಲ್ಲ ಕಡೆ ಇದರ ಪರಿಮಳ ಹರಡಲಿ ಎಂದರು ಹಾರೈಸಿದರು

ಈ ತಂಡದಿಂದ ಎಷ್ಟೋ ಸಕ್ರಮ ಕೆಲಸವಾಗಿವೆ ಅದನ್ನ ಕೆಲವು ಅಧಿಕಾರಿಗಳು ದುರುಪಯೋಗ ಪಡೆದುಕೊಂಡು ಅಕ್ರಮವಾಗಿ ವಶಪಡಿಸಿಕೊಂಡಿರುತ್ತಾರೆ

ಎಂದು ಬೇಸರ ವ್ಯಕ್ತಪಡಿಸಿದರು ನಾನು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೆ ನನಗೆ 10 ಎಕರೆ ಭೂಮಿ ಕೊಡಿ ನಾನು ಗಿಡ ನೆಟ್ಟು ಆಮ್ಲಜನಕ ಕೊಡುತ್ತೇನೆ ಎಂದು, ಸರ್ಕಾರವು ಭೂಮಿ ಕೊಟ್ಟಿದ್ರೆ ಮೊದಲು ಈ ಹಸಿರು ಹೊನಲು ಸೇವಾ ಸಂಸ್ಥೆಗೆ ಮೊದಲ ಆಯ್ಕೆ ಮಾಡುತ್ತಿದ್ದೆ ಎಂದರು

ಡೊಣೂರು ಚಾನುಕೋಟಿ ಸಿದ್ದಲಿಂಗ ಸ್ವಾಮಿಯವರು ಮಾತನಾಡಿ
ಕಳೆದ 10ವರ್ಷದಿಂದ ನಿರಂತರವಾಗಿ ನಮ್ಮ ಕೊಟ್ಟೂರನ್ನ ಹಸಿರು ಆಗಿಸುವಲ್ಲಿ ದೊಡ್ಡ ಪ್ರಯತ್ನ ಮಾಡಿಕೊಂಡು ಬಂದಂತಹ ಹಸಿರು ಹೊನಲು ತಂಡದ ಪ್ರಾಮಾಣಿಕ ಪ್ರಯತ್ನಕ್ಕೆ ಶುಭ ಹಾರೈಸಿದರು

ಈ ಸಂದರ್ಭದಲ್ಲಿ , ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ಗುರುರಾಜ್, ಕಾರ್ಯದರ್ಶಿ ಅಜಯ್ ಕುಮಾರ್. ಖಜಾಂಚಿ ಅಭಿಷೇಕ್. ಬಂಜರ್ ನಾಗರಾಜ್. ಕುಮಾರಿ ಶಿವಲೀಲಾ. ಇನ್ನು ಮುಂತಾದವರು ಇದ್ದರು

LEAVE A REPLY

Please enter your comment!
Please enter your name here