ವಿಜಯನಗರ: ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದ ಅಂಗನವಾಡಿ ಬಿ.ಕೇಂದ್ರದ 5,00000 – ಲಕ್ಷದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯನ್ನು ಅಳತೆ ಪಟ್ಟಿಯಲ್ಲಿ ಇರುವ ಹಾಗೆ ಕೆಲಸ ಮಾಡುತ್ತಿಲ್ಲ,
ಮೊದಲನೆಯ ಹಂತವನ್ನು ಕೆಲಸಕ್ಕೆ ಎನ್ಎಂಅರ್ ತೆಗೆದು ಜೆಸಿಬಿ ಯಂತ್ರದ ಮೂಲಕ ಕಾಮಗಾರಿಯನ್ನು ಮಾಡಿದ್ದು ಅಳತೆ ಪಟ್ಟಿಯಲ್ಲಿ ಇರುವಹಾಗೆ ಗುಣಮಟ್ಟದ ಕೆಲಸ ಮಾಡದೆ, ಕೆಂಪು ಮರಳು ಮಣ್ಣು ಮಿಶ್ರಿತ, ಕಡಿಮೆ ಸಿಮೆಂಟ್ ಉಪಯೋಗಿಸಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ಕುರಿಹಟ್ಟಿ ಗ್ರಾಮದ ಎಂ ಅಜ್ಜಯ್ಯ ಹಾಗೂ ಗ್ರಾಮದ ನಿವಾಸಿಗಳು ಅರೋಪಿಸಿ ದೂರು ಸಹ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ದೂರು ನೀಡಿದ್ದಾರೆ
ಆದ ಕಾರಣ ಇದಕ್ಕೆ ಸಂಬಂಧಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬೇಟಿನೀಡಿ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ವರದಿ:-ಮಂಜುನಾಥ್