ಕೂಡ್ಲಿಗಿಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ; ಕಾನೂನು ಅರಿವು ಜಾಗೃತಿ ಜಾಥ ಕಾರ್ಯಕ್ರಮ

0
121

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ (ನ-14) ಮಕ್ಕಳ ಹಕ್ಕುಗಳ ದಿನಾಚರಣೆ ಪ್ರಯುಕ್ತ. ಶಾಲಾ ಕಾಲೇಜುಗಳ ಮಕ್ಕಳಿಂದ ನ್ಯಾಯಾಲಯ ಇಲಾಖೆ ಹಾಗೂ ವಕೀಲರ ಸಂಘ, ತಾಲೂಕು ಕಾನೂನು ಸಮಿತಿ ನೇತೃತ್ವದಲ್ಲಿ ಜಾಗೃತಿ ಜಾಥ ಜರುಗಿತು. ಶ್ರೀಕೊತ್ತಲಾಂಜನೇಯ ಪಾದಗಟ್ಟೆಹತ್ತಿರ, ಜಾಥಾದಲ್ಲಿದ್ದ ಮಕ್ಕಳು ಮಾನವಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಜಾಗ್ರತೆ ಮೂಡಿಸುವ ಹೇಳಿಕೆಯಿರುವ ಫಲಕಗಳನ್ನ ಹಿಡಿದು ಘೋಷಣೆಗಳನ್ನು ಕೂಗಿದರು. ಹಿರಿಯ ನ್ಯಾಯಾಧೀಶರಾದ ನಾಗೇಶ್ ಮಾತನಾಡಿದರು,

ವಕೀಲರ ಸಂಘದ ಅಧ್ಯಕ್ಷ ಜಿ. ಹೊನ್ನೂರಪ್ಪ, ಪ್ಯಾನಲ್ ವಕೀಲರಾದ ಸಿ.ವಿರುಪಾಕ್ಷಪ್ಪ, ಬಿ. ಸಿದ್ದಲಿಂಗಪ್ಪ, ಹಾಗೂ ತಾಲೂಕ್ ದಂಡಾಧಿಕಾರಿಗಳಾದ ಜಗದೀಶ್, ಇಓ ಬಸಣ್ಣ, ಶಿಕ್ಷಣ ಅಧಿಕಾರಿ ಯುವರಾಜ್ ನಾಯಕ್, ಪಾಪಯ್ಯ, ಸಿದ್ದಲಿಂಗಯ್ಯ, ಸೇರಿದಂತೆ ಶ್ರೀರೇಣುಕ ಕಾಲೇಜ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವಕಾಲೇಜ್ ಮಕ್ಕಳು ಮತ್ತು ಶಿಕ್ಷಕರು, ಶ್ರೀವಿನಾಯಕ ಶಾಲಾ ಮಕ್ಕಳು ಮತ್ತು ಶಿಕ್ಷಕರು. ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಗೂ ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ, ವಿವಿಧ ಇಲಾಖೆಗಳ ಸಿಬ್ಬಂದಿಯವರು ಜಾಥದಲ್ಲಿ ಭಾಗಿಯಾಗಿದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here