ಸಂಡೂರು:ಜ:01:- ರೈತರ ಪಂಪ್ಸೆಟ್ಗಳಿಗೆ ಹಗಲು ವೇಳೆ ವಿದ್ಯುತ್ ಸರಬರಾಜು ಮಾಡಲು ಸಹಾಯಕ ಅಭಿಯಂತರರು ಗುಲ್ಬರ್ಗಾ, ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತೋರಣಗಲ್ಲು ಶಾಖೆಗೆ ಕರ್ನಾಟಕ ಪ್ರಾಂತ ರೈತ ಸಂಘ ಕುರೆಕುಪ್ಪ ಘಟಕದಿಂದ ಮನವಿಪತ್ರವನ್ನು ಸಲ್ಲಿಸಿದರು
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಕುರೆಕುಪ್ಪ ಗ್ರಾಮ ಘಟಕದ ಅಧ್ಯಕ್ಷ ಜಿ. ಪಂಪನಗೌಡ ಮಾತನಾಡಿ ಕುರೇಕುಪ್ಪ ಗ್ರಾಮದ ರೈತರ ಪಂಪ್ ಸೆಟ್ ಗಳಿಗೆ ಹಗಲು ವೇಳೆ ವಿದ್ಯುತ್ ಸರಬರಾಜು ಮಾಡಬೇಕು,ರಾತ್ರಿ 4 ಗಂಟೆಯಿಂದ ವಿದ್ಯುತ್ ಸರಬರಾಜು ಮಾಡುವುದರಿಂದ ರೈತರು ಹೊಲಗಳಿಗೆ ಹೋಗಿ ನೀರು ಹರಿಸಲು ಆಗುವುದಿಲ್ಲ ಇತ್ತೀಚಿನ ದಿನಗಳಲ್ಲಿ ಚಿರತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ಆದ್ದರಿಂದ ಬೆಳಿಗ್ಗೆ 6 ಘಂಟೆಯಿಂದ ಮಧ್ಯಾಹ್ನ 1ಘಂಟೆ ವರೆಗೆ ಹಗಲುವೇಳೆ ವಿದ್ಯುತ್ ಸರಬರಾಜು ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಕುರೆಕುಪ್ಪ ಘಟಕ ಹಾಗೂ ಊರಿನ ರೈತಬಾಂಧವರು ಒತ್ತಾಯಿಸಿದರು, ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಕಚೇರಿ ಮುಂದೆ ಹೋರಾಟ ಅನಿವಾರ್ಯವೆಂದು ತಿಳಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಗ್ರಾಮ ಘಟಕದ ಅಧ್ಯಕ್ಷರಾದ ಜಿ. ಪಂಪನಗೌಡ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವಿ.ದೇವಣ್ಣ ಹಾಗೂ ಕಾರ್ಯದರ್ಶಿಗಳಾದ ಜಿ.ಮಂಜುಗೌಡ. ಹಾಗೂ ಗ್ರಾಮದ ರೈತ ಮುಖಂಡರು
ಕೆ ಹೇಮಗಿರಿಯಪ್ಪ, ಕೆ.ಕಲ್ಗುಡೆಪ್ಪ, ಹೆಚ್. ಗಿರಿಯಪ್ಪ, ಎಂ.ಬಸವರಾಜಯ್ಯ ಮತ್ತು ಅರುಣ್ ಗೌಡ ಹಾಗೂ ಇತರರು