ನಿವೃತ್ತ ಸಿಬ್ಬಂಧಿಗಳ ಸ್ನೇಹ ಸಮ್ಮಿಲನ ಕೂಟ

0
123

ಶಿವಮೊಗ್ಗ, ಡಿಸೆಂಬರ್ 06 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ನಿವೃತ್ತಿಯಾದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ದಿನಾಂಕ 05.12.2021ರಂದು ಶಿವಮೊಗ್ಗ ಜಿಲ್ಲಾ ಅಡಿಕೆ ಮಂಡಿ ವರ್ತಕರ ಸಂಘದ ಸಭಾಂಗಣ, ಆರ್ ಎಂ ಸಿ ಆವರಣ, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಸ್ನೇಹ ಸಮ್ಮಿಲನ ಕೂಟವನ್ನು ಏರ್ಪಡಿಸಲಾಗಿತ್ತು.
ಎಲ್ಲಾ ನಿವೃತ್ತ ನೌಕರರು ಸಂಭ್ರಮದಿಂದ ಭಾಗವಹಿಸಿ, ಈ ಸಮ್ಮೇಳನ ಕೂಟವು ಇನ್ನು ಮುಂದೆ ಪ್ರತಿ ವರ್ಷವು ಸಹ ಆಯೋಜಿಸಲು ಕೋರಿದರು. ನಿವೃತ್ತರ ಸಮ್ಮಿಲನ ಕೂಟಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹಕರಿಸಿದರು. ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು.

LEAVE A REPLY

Please enter your comment!
Please enter your name here