ಅವಳಿ ಜಿಲ್ಲೆಯ 4 ತಾಲೂಕುಗಳಲ್ಲಿ ಹೊಸನ್ಯಾಯಬೆಲೆ ಅಂಗಡಿ…. ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರು:ಅರ್ಜಿ ಆಹ್ವಾನ

0
247

ಬಳ್ಳಾರಿ,ಡಿ.28 : ಬಳ್ಳಾರಿ ಜಿಲ್ಲೆಯ ಬಳ್ಳಾರಿ ಮತ್ತು ಸಂಡೂರು, ವಿಜಯಗರ ಜಿಲ್ಲೆಯ ಕೂಡ್ಲಿಗಿ ಹಾಗೂ ಹರಪನಹಳ್ಳಿಯ ತಾಲೂಕಿನ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಸಂಬಂಧಿಸಿದಂತೆ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ತಾಲೂಕಿನ ಚಳ್ಳಗುರ್ಕಿ, ಹಿರೇಹಡ್ಲಿಗಿ, ಹಲ್ಕುಂದಿ, ಬಸಾಪುರ, ಹೊನ್ನಳ್ಳಿ ತಾಂಡ, ಜಾನೆಕುಂಟ ತಾಂಡ, ಕುಡುತಿನಿ ಪಟ್ಟಣದ ಎಸ್.ಸಿ ಕಾಲೋನಿ, ಸಂಡೂರು ತಾಲೂಕಿನ ವೆಂಕಟಗಿರಿ ತಾಂಡ, ತೋಕೇನಹಳ್ಳಿ ತಾಂಡ, ತುಮುಟಿ ತಾಂಡ, ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ತಾಂಡ, ಶ್ರೀಕಂಠಾಪುರ ತಾಂಡ, ಗೋವಿಂದಗಿರಿ ತಾಂಡ, ಮೋತಿಕಲ್ ತಾಂಡ, ದೂಪದಹಳ್ಳಿ ತಾಂಡ, ಪೂಜಾರಹಳ್ಳಿ ತಾಂಡ, ಚಿಕ್ಕಜೋಗೇನಹಳ್ಳಿ ತಾಂಡ, ಹರಪನಹಳ್ಳಿ ತಾಲೂಕಿನ ಮಾಡ್ಲಗೇರಿ ತಾಂಡ, ಚನ್ನಾಪುರ ತಾಂಡ, ಆಣಿಮೇಗಳ ತಾಂಡ, ಬಾಪೂಜಿನಗರ ತಾಂಡ, ಬೆಂಡಿಗೇರಿ ಸಣ್ಣ ತಾಂಡ, ಬೆಂಡಿಗೇರಿ ಸೇವಾನಗರ (ದೊಡ್ಡ) ತಾಂಡ, ರಾಮಘಟ್ಟ ತಾಂಡ, ದಿದ್ದಿ ತಾಂಡ, ವ್ಯಾಸನ ತಾಂಡ, ಭಿಮ್ಲಾನಾಯ್ಕ ತಾಂಡ, ಯರಬಹಳ್ಳಿ ತಾಂಡ, ಕುಂಚುರ ಕೇರೆ ತಾಂಡ, ಕಣವಿ ತಾಂಡ, ಅಗ್ರಹಾರ ತಾಂಡ, ಹಾರಕನಾಳು ದೊಡ್ಡ ತಾಂಡ, ಶಿವಪುರ ತಾಂಡ, ಕಂಡಿಕೇರಿ ತಾಂಡ, ತಾಳೆದಹಳ್ಳಿ ಮತ್ತು ತಾಳೇದಹಳ್ಳಿ ತಾಂಡ, ಐಗಳ ಬಸ್ಸಾಪುರ (ವಡೇರ) ತಾಂಡಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನಿಗಧಿತ ನಮೂನೆ-ಎ ನಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿವಸಗಳೊಳಗಾಗಿ ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, (ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿ, ಆವರಣ) ಬಳ್ಳಾರಿ ಇವರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ/ಸಂಡೂರು/ಕೂಡ್ಲಿಗಿ/ಹರಪನಹಳ್ಳಿಯ ತಹಶೀಲ್ದಾರರು ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಬಳ್ಳಾರಿ ಇವರನ್ನು ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here