ಸಚಿವ ಈಶ್ವರಪ್ಪರವರನ್ನು ತಕ್ಷಣವೇ ಕ್ಯಾಬಿನೆಟ್ನಿಂದ ಹೊರ ಹಾಕಿ:ತಿಪ್ಪೇಶ್ ಗಚ್ಚಿನಮನೆ.

0
605

ಬಳ್ಳಾರಿ:ಪೆ:22:- ರಾಷ್ಟ್ರಧ್ವಜ ಹಾರಾಡುವ ಕಂಬದಲ್ಲಿ ಕೇಸರಿ ದ್ವಜವನ್ನು ಹಾರಿಸುತ್ತೇನೆ ಎಂದು ದೇಶದ್ರೋಹಿ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ರವರನ್ನು ತಕ್ಷಣವೇ ಸಚಿವ ಸಂಪುಟದಿಂದ ಹೊರ ಹಾಕಿ ರಾಜೀನಾಮೆ ಕೊಡಬೇಕೆಂದು NSUI ರಾಜ್ಯ ಕಾರ್ಯದರ್ಶಿ ತಿಪ್ಪೇಶ್ ಗಚ್ಚಿನಮನೆ ಒತ್ತಾಯಿಸಿದ್ದಾರೆ

ಸಚಿವ ಕೆ.ಎಸ್ ಈಶ್ವರಪ್ಪನವರು ರಾಷ್ಟ್ರದ್ವಜ ಕುರಿತು ಅವಹೇಳನ ಹೇಳಿಕೆ ನೀಡಿದ ಪ್ರಯುಕ್ತ ಸಚಿವರ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಮನವಿ NSUI ಘಟಕದ ವತಿಯಿಂದ ಒತ್ತಾಯಿಸಿದರು.

ದಿ 9/2/2022ರಂದು ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಗೊಳಿಸುವ ಮಾತುಗಳನ್ನು ಆಡುತ್ತಾರೆ. ಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ದೇಶದ ಕೆಂಪುಕೋಟೆ ಸೇರಿದಂತೆ ಎಲ್ಲೆಡೆ ರಾಷ್ಟ್ರಧ್ವಜದ ಬದಲಾಗಿ ಭಗವದ್ವಜ ಹರಡಲಿದೆ ಎಂದು ಪ್ರಚೋದನಕಾರಿ ಹೇಳಿಕೆಯನ್ನು ನೀಡಿರುವ ಕೆ.ಎಸ್ ಈಶ್ವರಪ್ಪನವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ NSUI ಸಮಿತಿ ಆಗ್ರಹಿಸಿದೆ.

ವೈವಿಧ್ಯತೆಯಲ್ಲಿ ಐಕ್ಯತೆಯನ್ನು ಕಾಣುವ ಭಾರತ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಬೌದ್ಧ ಹಲವಾರು ಜಾತಿ ಮತ ಪಂಥಗಳ ನೆಲೆಬೀಡಾದ ಭಾರತ ದೇಶ ತನ್ನದೇಯಾದ ರಾಷ್ಟ್ರಧ್ವಜವನ್ನು ಹೊಂದಿದೆ. ಅಂತಹ ಧ್ವಜವನ್ನು ತೆಗೆದು ಕೇಸರಿ ದ್ವಜವನ್ನು ಆರಿಸುತ್ತೇನೆ ಎಂದು ಹೇಳಿದ ಹೇಳಿಕೆಯನ್ನು ಈಶ್ವರಪ್ಪನವರು ಭಾರತ ವಿಧಿವತ್ತವಾದ ಸಂವಿಧಾನಕ್ಕೆ ಮತ್ತು ಭಾರತ ದೇಶದ 135 ಕೋಟಿ ಭಾರತೀಯರು ಅವಮಾನಿಸಿದ್ದಾರೆ ಎಂದು ಹೇಳಿದರು.

ಈ ರೀತಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹೇಳಿಕೆಗಳನ್ನು ನೀಡುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು
NSUI ರಾಜ್ಯ ಕಾರ್ಯದರ್ಶಿ ತಿಪ್ಪೇಶ್ ಗಚ್ಚಿನಮನೆ ಎಚ್ಚರಿಕೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here