ಸಂಡೂರು:ಪೆ:23:-ತಾಲೂಕಿನ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ.ಕೆ ಹಳ್ಳಿ ಗ್ರಾಮದ ಶ್ರೀ ಬೇವಿನಹಳ್ಳಿ ದುರುಗಮ್ಮ ಜಾತ್ರೆಯ ಅಂಗವಾಗಿ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಳ್ಳಾರಿಯ ವಿಮ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು, ಜಾತ್ರೆಗೆ ಬಂದ ಸಾರ್ವಜನಿಕರು ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಸಿ.ಕೆ.ಹಳ್ಳಿ ಶಿವು ಸೇರಿ ಒಟ್ಟು ಹನ್ನೆರಡು ಜನರು ( 12 ಯುನಿಟ್ ) ರಕ್ತದಾನ ಮಾಡಿದರು,
ಈ ಸಂದರ್ಭದಲ್ಲಿ ಡಾ.ಚಂದ್ರಪ್ಪ, ಸಿ.ಹೆಚ್.ಒ ಗಣೇಶ್, ಐ.ಸಿ.ಟಿ.ಸಿ ಕೌನ್ಸಿಲರ್ ಮರೇಗೌಡ, ಆರೋಗ್ಯ ಸುರಕ್ಷಾಧಿಕಾರಿ ಅರುಣಾ, ಆಶಾ ಕಾರ್ಯಕರ್ತೆ ಗೌರಮ್ಮ, ಇತರರು ಉಪಸ್ಥಿತರಿದ್ದರು