*ದಾರಿ ತೋರು ಬಾ ತಾಯೆ
ಜಗದ ಜಂಜಡಕೆ
ಮುಕ್ತಿ ನೀಡು ಬಾ ತಾಯೆ
ಯುಕ್ತಿಯ ನೀಡಿ.
ಜ್ಞಾನದ ಬೆಳಕ ಹರಿಸಿ
ನೀತಿ ನೇಮದಿ ಉಪಕರಿಸಿ
ಬದುಕಿನ ಅರ್ಥವಾಗಿ
ಬುದ್ಧಿ ಪ್ರವರ್ಧಿಸು ಬಾ ತಾಯೆ.
ಶೃಂಗೇರಿ ಪೀಠದ ಒಡತಿ
ಮನೆಮನದ ಕತ್ತಲ ಸಂಸರಿಸಿ
ಅಂಗಳದ ಕಿಕಿಲ ನಗುವಿಗೆ ಕಾರಣವಾಗಿ
ಬೆಳದಿಂಗಳ ಚೆಲ್ಲು ಬಾ ತಾಯೆ.
ಅರಿವಿನಮರನೆಗೆ ಸಿರಿದೇವಿ
ಬರದ ಬಯಲಿಗೆ ಚಿಗುರೆಲೆಯಾಗಿ
ದ್ಯಾನ ಸೂಕ್ತಿಯ ಕಲಿಸುತ
ಸುಜ್ಞಾನದ ನಡೆಯ ಕಲ್ಪಿಸು ಬಾ.
ನೋವು ನಲಿವಿಗೆ ಆಸರೆ
ಓದುವ ಹಂಬಲಕೆ ಸ್ಥಿರತೆ
ಸಾರ ಸೌರಭಕದ ಖಣಿಯಾಗಿ
ಜಗದ ಜನನಿ ಬಾ ತಾಯೆ.
ಭೀತಿಯ ಮೆಟ್ಟಲು
ಸಮರ್ಪಕ ಉತ್ತರಿಸಿ
ಮತಿ ಹೀನತೆಯ ದೂರಿಕರಿಸಿ
ವಿನಯದೊಡವೆ ನೀಡು ಬಾ ತಾಯೆ.
ಬಾ ತಾಯೆ ಬಾರೆ
ಕಲ್ಮಶವ ತಿಳಿಮಾಡಿ
ಬೇಗುದಿಯ ನೀಗಲು
ತೇಗದಂತೆ ನೀ ಬಾ ತಾಯೆ.
ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು