ನವಯುಗದ ಮನ್ವಂತರ
ಸಾಮರಸ್ಯ ಹರಸಿ
ಕಳೆ ಕೊಳೆಯ ತ್ಯಜಿಸಿ.
ಜಗದ ಜಂಜಡ ಮರೆತು
ಎಲ್ಲರೊಳಗೊಂದಾಗಿ ಬೆರೆತು
ಕಷ್ಟ ಸಹಿಷ್ಣುತೆ ಕಲಿಸುತ.
ಶ್ರೀರಾಮನ ಪಟ್ಟಾಭಿಷೇಕ ದಿನ
ಸರ್ವ ಜನಕೆ ಶುಭಕೋರುತ
ಜೀವನದ ಮರ್ಮ ತಿಳಿಸುತ.
ಚೈತನ್ಯದ ಮಣಿಮಾಲೆ
ಸೃಷ್ಟಿಯ ಆದಿಯ ದಿನ
ಜೀವ ಸಂಕುಲಕೆ ನೆಲೆಯಾಗಿಸುತ.
ಭರವಸೆಯ ಹೊತ್ತು ಬಿಡಿ
ಕಡುಕಷ್ಟ ಮಂಜಾಗಿಸಿ
ಸುಡು ಬಿಸಿಲಿಡು ಜಗ್ಗದಿರಿ.
ಯುಗಾದಿಯ ಮರಳಿ ಬರುತಿದೆ
ಸೊಭಗಿನ ಖಣಿಯಾಗಿ
ಒಳಿತನು ಆಯ್ದುಕೊಳ್ಳುಲು ಸಾಗುತ.
@ರೇಷ್ಮಾ ಕಂದಕೂರ@
ಸಿಂಧನೂರು