ರಾಷ್ಟ್ರ ಮತ್ತು ರಾಜ್ಯ ರೋಗಮುಕ್ತ ಯೋಗ ಯುಕ್ತ ಆಗುವಲ್ಲಿ ಪ್ರಯತ್ನ: ಹರಿಹರ ಪೀಠದ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮಿ

0
215

ವಿಜಯನಗರ/ಕೊಟ್ಟೂರು:ಮೇ:19:- ಪತಂಜಲಿ ಮತ್ತಿತರ ಸಂಘ ಸಂಸ್ಥೆಗಳು ಆಯೋಜಿಸಿದ್ದ ಯೋಗ ಪ್ರಚಾರ ಸಭೆ ವಚನಾನಂದ ಸ್ವಾಮೀಜಿ ಅಭಿಮತ

ಭಾರತ ವಿಶ್ವ ರಾಜಧಾನಿಯಾಗುವ ನಿಟ್ಟಿನಲ್ಲಿ ರಾಷ್ಟ್ರದು ತಿಳಿಯೋಬ್ಬರು ಯೋಗಾಸನಕ್ಕೆ ಮಾಡಲು ಮುಂದಾಗಬೇಕು ರಾಷ್ಟ್ರ ಮತ್ತು ರಾಜ್ಯ ರೋಗಮುಕ್ತ ಯೋಗ ಯುಕ್ತ ಆಗುವಲ್ಲಿ ಪ್ರಯತ್ನ ಸಾಗಿಸುವುದರ ಜೊತೆಗೆ ಗುರಿ ತಲುಪೋಣ ಎಂದು ಯೋಗ ಗುರು ಹರಿಹರ ಪೀಠದ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಕರೆ ನೀಡಿದರು.

ಇಲ್ಲಿನ ತುಂಗಭದ್ರಾ ಸಿಪಿಈಡಿ ಮಹಾವಿದ್ಯಾಲಯ ಆವರಣದ ಸಭಾಂಗಣದಲ್ಲಿ ಕೊಟ್ಟೂರು ಪತಂಜಲಿ ಮತ್ತಿತರ ಸಂಘ ಸಂಸ್ಥೆಗಳು ಆಯೋಜಿಸಿದ್ದ ಯೋಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಯೋಗ ಕಲಿಕೆಯಿಂದ ಏಕಾಗ್ರತೆಯನ್ನು ಸದಾ ಕಾಪಾಡಿಕೊಳ್ಳಬಹುದಾಗಿದೆ.
ಇದನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಆರೋಗ್ಯಕರ ಮನಸ್ಸನ್ನು ಕಡೆ ವರೆಗೂ ರೂಪಿಸಿಕೊಳ್ಳಬಹುದಾಗಿದೆ. ರಾಜ್ಯ, ವಿಜಯನಗರ ಜಿಲ್ಲೆ ಸಂಪೂರ್ಣವಾಗಿ ಯೋಗ ಯುಕ್ತವಾಗಿರಲು ಸಹಕರಿಸೋಣ ಎಂದು ಹೇಳಿದರು.

ವಕೀಲ ಪ್ರಕಾಶ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತಾರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಜಗದ್ಗುರು ವಚನಾನಂದ ಸ್ವಾಮಿಗಳು ಜಿಲ್ಲಾದ್ಯಂತ ವಿಶೇಷ ಯೋಗ ಶಿಬಿರವನ್ನು ನಡೆಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸೋಣ ಎಂದರು.

ಅಲಬೂರು ಶಾಂತಕುಮಾರ್‌ ಸ್ವಾಗತಿಸಿದರು. ಪತಂಜಲಿ ಸಂಸ್ಥೆಯ ರಾಜೇಶ್ ಕರ್ವಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಪಿ. ಚನ್ನಬಸವನಗೌಡ, ಕೊಟ್ಟೂರು ಬಿಜೆಪಿ ಅಧ್ಯಕ್ಷ ಬಿ.ಆರ್‌. ವಿಕ್ರಮ್, ಡಾ. ಬಿ.ಸಿ. ಮೂಗಪ್ಪ, ವಿಜಯಕುಮಾರ್, ಯೋಗಿಶ್ವರ, ದಿನ್ನೆ, ನಾಗರಾಜಬಂಜಾರ್, ಚಾಪಿಚಂದ್ರಪ್ಪ, ಶಿವಕುಮಾರ್, ಖಾನಾವಳಿ, ಎಂ. ಶಿವಣ್ಣ, ಎಸ್.ಎಸ್. ಅಶೋಕ, ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here