ಕೊಟ್ಟೂರು:ಜೂನ್:03:-ಕೊಟ್ಟೂರಿನ ತುಂಗಭದ್ರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ತುಂಗಭದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಬಿ.ಇಡಿ. ಶ್ರೀ ಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ವಿಶ್ವ ವಿದ್ಯಾಲಯದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವು ತುಂಗಭದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಗಭದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಶಿವಣ್ಣ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ಹುಲುಮನಿ ಮಲ್ಲೇಶಪ್ಪ ನವರು ನೆರವೇರಿಸಿದರು
ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆಯನ್ನು ಶ್ರೀ ಸಿ.ಬಸವರಾಜ್ ಮುಖ್ಯೋಪಾಧ್ಯಾಯರು ಸರ್ಕಾರಿ ಬಾಲಕರ ಪ್ರೌಢಶಾಲೆ ನೆರವೇರಿಸಿದರು.ಗುರು ಕೊಟ್ಟೂರೇಶ್ವರ ಪ್ರೌಢಶಾಲೆ ಮುಖ್ಯ ಗುರುಗಳಾದ ಶ್ರೀ ಎಸ್.ಕೊಟ್ರೇಶ್ ವಿದ್ಯಾರ್ಥಿ ಸಂಘದ ಫಲಕ ಅನಾವರಣ ಮಾಡಿದರು. ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀ ಎ.ಮಹಂತೇಶ್ ಹಾಗೂ ಪ್ರಾಚಾರ್ಯರಾದ ಶ್ರೀ ಎಸ್.ಎಂ.ರವಿಕುಮಾರ್ ಶ್ರೀಮತಿ ವಾಣಿ ವೇದಿಕೆಯಲ್ಲಿದ್ದರು. ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಬಿ.ಮಮ್ತಾಜ್, ಟಿ.ಚೈತ್ರ, ಹೆಚ್.ಕೆ. ಚಂದನ ಇವರನ್ನು ಸನ್ಮಾನಿಸಲಾಯಿತು.
ತುಂಗಭದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ಅರವಿಂದ್ ಬಸಾಪುರ್, ಸ್ವಾಗತಿಸಿದರು. ನಾಗವೇಣಿ ಸುಷ್ಮಾ ನಿರ್ವಹಿಸಿದರು.
ವರದಿ: ಶಿವರಾಜ್ ಕನ್ನಡಿಗ