ಕರ್ನಾಟಕ ಪತ್ರಕರ್ತರ ಸಂಘಕ್ಕೆ ಅರುಣ್ ಭೂಪಾಲ್ ಬಳ್ಳಾರಿ ಜಿಲ್ಲಾ ಸಂಚಾಲಕರಾಗಿ ನೇಮಕ

0
151

ಬಳ್ಳಾರಿ,ಜೂ.೧೩-ಕರ್ನಾಟಕ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕಕ್ಕೆ ನೂತನ ಸಂಚಾಲಕರಾಗಿ ಅರುಣ್ ಭೂಪಾಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಬಿ ಶಿವಪೂಜೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗೋಪಾಲ್ ಅವರು ಈ ಕುರಿತು ಅರುಣ್ ಭೂಪಾಲ್ ಅವರಿಗೆ ಆದೇಶ ನೀಡಿದ್ದು, ಮುಂದಿನ ಆದೇಶದವರೆಗೆ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ ಸಂಚಾಲಕರಾಗಿ ಮುಂದುವರಿಯುವಂತೆ ತಿಳಿಸಿದ್ದಾರೆ.

ಬಿಸಿಲೂರು ಪೋಸ್ಟ್ ಪತ್ರಿಕಾ ಕಚೇರಿಯಲ್ಲಿ ಆದೇಶ ಪತ್ರ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘದ ಸಂಚಾಲಕ ಅರುಣ್ ಭೂಪಾಲ್ ಅವರು, ಕರ್ನಾಟಕ ಪತ್ರಕರ್ತರ ಸಂಘವು ಪತ್ರಕರ್ತರ ಹಿತಾಸಕ್ತಿ ಕಾಪಾಡುವ ಸಂಘಟನೆಯಾಗಿದೆ. ಆರ್‌ಎನ್‌ಐ ನೋಂದಣಿ ಹೊಂದಿರುವ ಪತ್ರಿಕೆಗಳ ಪತ್ರಕರ್ತರು ಈ ಸಂಘದ ಸದಸ್ಯತ್ವ ಪಡೆಯಲು ಅವಕಾಶವಿದೆ. ಈ ಸಂಘಟನೆಯಲ್ಲಿ ಸದಸ್ಯತ್ವ ಹೊಂದಿದವರಿಗೆ ವೈದ್ಯಕೀಯ, ಇನ್ಸೂರೆನ್ಸ್ ಸೌಲಭ್ಯ, ಗ್ರಾಮೀಣ ಭಾಗದ ಪತ್ರಕರ್ತರ ಏಳ್ಗೆಗೆ ವಿವಿಧ ಸೌಲಭ್ಯಗಳಿವೆ. ಆಸಕ್ತರು ಸಂಘದ ಸದಸ್ಯರಾಗಬಹುದು ಎಂದು ತಿಳಿಸಿದರು.

ಪತ್ರಿಕಾ ವಿತರಕರಿಗೂ ಈ ಸಂಘದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲು ಅವಕಾಶವಿದೆ. ಪತ್ರಕರ್ತರಿಗೆ ಲಭಿಸುವ ಸೌಲಭ್ಯಗಳೆಲ್ಲ ಪತ್ರಿಕಾ ವಿತರಕರಿಗೂ ಸಿಗಲಿದೆ. ಪ್ರತ್ಯೇಕ ಸಹಕಾರಿ ಬ್ಯಾಂಕ್ ಕೂಡ ಇದ್ದು, ಬಳ್ಳಾರಿಯಲ್ಲಿ ಸಂಘದ ಸದಸ್ಯತ್ವ ಹೆಚ್ಚಿಗೆ ಆದಲ್ಲಿ ಇಲ್ಲೂ ಕೂಡ ಸಹಕಾರಿ ಬ್ಯಾಂಕ್ ಕೂಡ ಸ್ಥಾಪಿಸುವ ಗುರಿ ಇದೆ ಎಂದರು.

ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಾದ ದುರುಗೇಶ್, ಮಹೇಶ್, ಅಸ್ಲಾಂ ಬಾಷ(ಹೊನ್ನಳ್ಳಿ), ಹೇಮಂತ್ ರಾಜ್, ನವೀನ್ ಮತ್ತು ಸುನೀಲ್ ಮತ್ತು ಶ್ವೇತಾ ಹೆಗಡೆ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here