ಕೊಟ್ಟೂರು:ಜುಲೈ:06:-ಮನುಷ್ಯ ಸಮಾಜಜೀವಿ. ಸದಾ ಸಂಬಂಧಗಳ ಸಂಕೋಲೆಯಲ್ಲಿ ಬದುಕುತ್ತಿರುತ್ತಾನೆ. ತನ್ನ ಜೊತೆ ಪ್ರೀತಿಯಿಂದಿರುವ ನನ್ನ ಪ್ರೀತಿಯ ಗೆಳೆಯ ಎಸ್ ಪಿ ಪ್ರಕಾಶ್ ಪ್ರಕಾಶ್ ಸಂಬಂಧಗಳನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಹವಣಿಸುತ್ತಾನೆ. ಗೆಳೆಯರು, ಬಂಧುಗಳು, ತಂದೆ – ತಾಯಂದಿರು, ಅಣ್ಣ – ತಮ್ಮಂದಿರು ಹೀಗೆ ಹಲವಾರು ಸಂಬಂಧಗಳ ಮಿಶ್ರ ಹೂರಣ ಮನುಷ್ಯನ ಜೀವನದಲ್ಲಿ ಒಂದು ಭಾಗವಾಗಿರುತ್ತದೆ.
ತನಗೆ ತನ್ನ ಹುಟ್ಟುಹಬ್ಬ ನೆನಪಿರುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ, ಆದರೆ ತನ್ನ ಪ್ರೀತಿಪಾತ್ರರ ಮತ್ತು ತನ್ನ ಮನಸ್ಸಿಗೆ ಹತ್ತಿರವಾದವರ ಹುಟ್ಟುಹಬ್ಬವನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ವರ್ಷವೆಲ್ಲಾ ಆ ಸಂದರ್ಭಕ್ಕೆ ಆತುರವಾಗಿ ಕಾದು ಹುಟ್ಟುಹಬ್ಬದ ಸಂಭ್ರಮದ ಸಿಹಿಯನ್ನು ಎಲ್ಲರ ಜೊತೆ ಹಂಚಿಕೊಳ್ಳಲು ಮನುಷ್ಯನ ಪ್ರಯತ್ನ ನಡೆಯುತ್ತದೆ.
ಅಪ್ಪ ಮಗಳಿಗೆ, ಪ್ರಿಯತಮ ಪ್ರೇಯಸಿಗೆ, ಮಗ ತಾಯಿಗೆ ಹೀಗೆ ಹಲವರು ತಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬದ ಶುಭ ದಿನದಂದು ಹೇಗೆಲ್ಲಾ ಶುಭಸೂಚಕ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ
ವರದಿ: ಶಿವರಾಜ್ ಕನ್ನಡಿಗ