ಕೊಟ್ಟೂರು ರಿಯಲ್ ಎಸ್ಟೇಟ್ ಉದ್ಯಮಿಗೆ ಮಾರಕಾಸ್ತ್ರಗಳಿಂದ ಹೆದರಿಸಿ 20 ಲಕ್ಷ ಹಣ ದೋಚಿ ಪರಾರಿ

0
905

ಕೊಟ್ಟೂರು:ಜುಲೈ:21:-ಬುಧವಾರ ಬೆಳಿಗ್ಗೆ ರಿಯಲ್ ಎಸ್ಟೇಟ್ ಉದ್ಯಮಿಯಾದ ಹಾಲೇಶ್ ಅವರನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ.

ಹಾಲೇಶ್ ರವರು ರಿಯಲ್ ಎಸ್ಟೇಟ್ ಉದ್ಯಮಿ. ಕಾರಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ಸೈಟ್ ಕೊಡಿಸುವಂತೆ ಕೇಳಿ ಕರೆದುಕೊಂಡು ಹೋಗಿ ಅಪಹರಣ ಮಾಡಿದ್ದಾರೆ. ದಾರಿಯ ಮಧ್ಯದಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳು ಬಂದು ಸೇರ್ಪಡೆಯಾಗಿದ್ದಾರೆ.

ದಾವಣಗೆರೆಗೆ ಕರೆದುಕೊಂಡು ಹೋಗಿ ಆ ವ್ಯಕ್ತಿಗೆ ಮಾರಕಸ್ತ್ರವನ್ನು ತೋರಿಸಿ 80 ಲಕ್ಷದ ಹಣದ ಬೇಡಿಕೆಯನ್ನು ಇಟ್ಟಿದ್ದಾರೆ. ನಂತರ ಇವರು 20 ಲಕ್ಷ ಹಣ ಕೊಡುವುದಾಗಿ ಒಪ್ಪಿಕೊಂಡಿದ್ದರು.

ಆ ನಾಲ್ವರು ವ್ಯಕ್ತಿಗಳು ಕೊಟ್ಟೂರಿಗೆ ಅವರನ್ನು ಕರೆ ತಂದು 20 ಲಕ್ಷವನ್ನು ಅವರಿಂದ ತೆಗೆದುಕೊಂಡು ಅಪಹರಣ ಆದ ವ್ಯಕ್ತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯನ್ನು ಮಾಡಲು ಮೂರು ತನಿಖಾ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆ ವ್ಯಕ್ತಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡಲಾಗುವುದು ಎಂದು ವಿಜಯನಗರ ಜಿಲ್ಲೆಯ ಎಸ್ಪಿ ಡಾ. ಅರುಣ್ ರವರು ಸುದ್ದಿಗಾರರೊಂದಿಗೆ ತಿಳಿಸಿದರು.

LEAVE A REPLY

Please enter your comment!
Please enter your name here