ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಟ್ಟೂರು ವಿಭಾಗಕ್ಕೆ ಪ್ರಥಮ ಸ್ಥಾನ.

0
408

ರಾಜ್ಯ ಮಟ್ಟದ ಕರಾಟೆ ಕ್ರೀಡೆಯಲ್ಲಿ ಕೊಟ್ಟೂರು ಪಟ್ಟಣದ ಗುರುದೇವ ಆಂಗ್ಲ ಮೀಡಿಯಂ ವಿದ್ಯಾರ್ಥಿ 13 ವರ್ಷದ ಕಾಂಚನ ಕೊಣ್ಣಾನವರು ಕಟದಲ್ಲಿ ಬ್ರೌನ್ ಬೆಲ್ಟ್ ಮತ್ತು ಫೈಟ್ 30ಕೆಜಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಗೈದಿದ್ದಾರೆ.

ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯ ಮಟ್ಟದ ಎರಡನೇ ಕರಾಟೆ ಪಂದ್ಯಾವಳಿ ಕ್ರೀಡೆಯಲ್ಲಿ 31 ಜಿಲ್ಲೆಗಳು ಸೇರಿ ಒಟ್ಟು 800 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ

ಇದರಲ್ಲಿ ವಿಜಯ ನಗರ ಜಿಲ್ಲೆಯ ಕೊಟ್ಟೂರು ಭಾಗದ ಒಟ್ಟು 06 ವಿದ್ಯರ್ಥಿಗಳು ಭಾಗವಹಿಸಿ ರಾಜ್ಯಕ್ಕೆ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿ ಸಾಧನೆ ಗೈದಿದ್ದಾರೆ ಎಂದು ಕೊಟ್ಟೂರು ಕರಾಟೆ ಮಾಸ್ಟರ್ ಯಮನೂರರವರು ತಿಳಿಸಿದರು

ಕೀರ್ತಿ, ಕಟದಲ್ಲಿ ಪ್ರಥಮ ಸ್ಥಾನ. ವಿಘ್ನೇಶ್ ನಾಯ್ಕ 50 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ. ಶಿವರಾಜ್ ಕೊಣ್ಣಾನವರು . ಪರ್ಪಲ್ ಬೆಲ್ಟ್, ತೃತೀಯ ಸ್ಥಾನ.
ಆದಿತ್ಯ ಚೌವನ್, ಎಲೋ ಬೆಲ್ಟ್ ದ್ವಿತೀಯ ಸ್ಥಾನ.
ಕೆ ಸಿ ದೀಪಿಕಾ, ಕಟದಲ್ಲಿ ದ್ವಿತೀಯ ಸ್ಥಾನ. ಪಡೆದುಕೊಂಡರು ಎಂದು ಹೇಳಲಾಯಿತು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here