ಕೊಟ್ಟೂರನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗ , 400 ಸ್ವಯಂ ಸೇವಕರಿಂದ ಅಕ್ಟೋಬರ್ -14 ರಂದು ಬೃಹತ್ ಪಥ ಸಂಚಲನ.

0
507

ಕೊಟ್ಟೂರು:ಆ:10:-ರಾಷ್ಟ್ರೀಯ ಸ್ವಯಂ ಸೇವಕ ಸಂಘ, 2022 ರ ಪ್ರಾಥಮಿಕ ಶಿಕ್ಷಾವರ್ಗವು ಅ.7 ರಿಂದ 14 ರವರೆಗೆ ತರಬೇತಿ ನಡೆಯಲಿದ್ದು ಆಸಕ್ತಿಯುಳ್ಳವರು ಪಾಲ್ಗೊಂಡು ಶಿಕ್ಷಾವರ್ಗವನ್ನು ಯಶಸ್ವಿಗೊಳಿಸಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಕಾರ್ಯವಾಹ ಕೇಶವ ಜೀ ಮತ್ತು ಕೃಷ್ಣ ಮೂರ್ತಿ ಜೀ ತಿಳಿಸಿದರು.

ಪಟ್ಟಣದ ಹೊರವಲಯದಲ್ಲಿನ ತರಳಬಾಳು ಆಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಡಾ.ಬಿ.ಸಿ ಮೂಗಪ್ಪ ಅವರ ಅಧ್ಯಕ್ಷತೆಯಲ್ಲಿ ಶಿಬಿರಕ್ಕೆ ಚಾಲನೆ ದೊರೆತಿದೆ.

198 ಶಿಕ್ಷಾರ್ಥಿಗಳಿಗೆ 30 ಶಿಕ್ಷಕರಿಂದ ಪ್ರತಿ ದಿನ ಯೋಗ ಮತ್ತು ಬೌದ್ಧಿಕ ಶಿಕ್ಷಣ ನಡೆಯುತ್ತಿದ್ದು ಅ-14 ರಂದು ಸಂಜೆ 4 ಗಂಟೆಗೆ ಬಾಲಕರ ಪ್ರೌಢ ಶಾಲೆ ಮೈದಾನದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಸುಮಾರು 400 ಸ್ವಯಂ ಸೇವಕರಿಂದ ಬೃಹತ್ ಪಥ ಸಂಚಲನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಗ್ರಾಮ ವಿಕಾಸ ಪ್ರಮುಖ ರಾಜಶೇಖರ ಜೀ, ಪ್ರಭಂಧಕರಾಗಿ ಕಾಸಲ್ ಮಂಜುನಾಥ, ಪ್ರಸನ್ನ ಕುಮಾರ್,ಹೆಚ್.ಎಂ ಪ್ರಭುಸ್ವಾಮಿ,ಕಡ್ಲಿ ವೀರಣ್ಣ,ಕಣುಕುಪ್ಪಿ ವೀರಣ್ಣ,ಚೌಡನಗೌಡರು ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here