ಶ್ರೀ ವಲ್ಲಭಭಾಯ್ ಪಟೇಲ್ ಅವರ ಕಾರ್ಯಗಳು ಅವಿಸ್ಮರಣೀಯ; ಮುಖ್ಯ ಶಿಕ್ಷಕಿ ಅನೀಸ್ ಪಾತಿಮಾ,

0
129

ಸಂಡೂರು: ಅ:31: ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮತ್ತು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಇವರ ಸಹಯೋಗದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ “ರಾಷ್ಟ್ರೀಯ ಏಕತಾ ದಿನ” ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅನೀಸ್ ಫಾತಿಮಾ ಅವರು ಮಾತನಾಡಿ ಸಾರ್ವಕಾಲಿಕವಾಗಿ ದೇಶ ಹೆಮ್ಮೆ ಪಡುವಂತ ಕಾರ್ಯ ಮಾಡಿದ ದೇಶದ ಪ್ರಪ್ರಥಮ ಉಪ ಪ್ರಧಾನಿ ಮತ್ತು ಪ್ರಥಮ ಗೃಹಮಂತ್ರಿಯಾಗಿದ್ದ ಶ್ರೀ ವಲ್ಲಭಭಾಯ್ ಪಟೇಲ್ ಅವರ ಕಾರ್ಯಗಳು ಅವಿಸ್ಮರಣೀಯ ಎಂದು ನುಡಿದರು,

ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾದ ದೊಡ್ಡ ಬಸವ ಅವರು ಮಾತನಾಡಿ ದೇಶದ ಏಕೀಕರಣದ ಸ್ಪೂರ್ತಿಯನ್ನು ಸದಾಕಾಲ ಸ್ಮರಿಸಬೇಕಿದೆ, ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸಿದ ಮಹನೀಯರು, ಸ್ವತಂತ್ರ ಭಾರತದಲ್ಲಿ ಹಲವು ರಾಜರ ಆಡಳಿತವಿದ್ದ ರಾಜ್ಯಗಳನ್ನು ಒಟ್ಟು ಗೂಡಿಸಲು ಮಾಡಿದ ಪ್ರಯತ್ನ ಮತ್ತು ಏಕತೆಯ ದೂರದೃಷ್ಟಿ ಎಲ್ಲರೂ ಹೆಮ್ಮೆ ಪಡುವಂತಹದ್ದು, ಅವರ ಸಿದ್ದಾಂತ, ತತ್ವ, ಚಿಂತನೆಗಳನ್ನು ಅಳವಡಿಸಿ ಕೊಳ್ಳೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಪಟೇಲರ ಸಾಧನೆಗಳು, ಮತ್ತು ಐಕ್ಯತಾ ಭಾವ, ದೇಶ ಪ್ರೇಮ ಸಾರುವ ಕುರಿತು ಭಾಷಣ, ಪ್ರಬಂಧ ರಚನೆಯ ಅಭ್ಯಾಸವನ್ನು ಮಕ್ಕಳು ರೂಢಿಸಿಕೊಳ್ಳ ಬೇಕೆಂದು ತಿಳಿಸಿದರು,ಪ್ರಪಂಚದ ಅತೀ ಎತ್ತರ 182 ಮೀಟರ್ ಎತ್ತರದ ಅವರ ಕಂಚಿನ ಪ್ರತಿಮೆ ನಮ್ಮ ದೇಶದಲ್ಲಿ ಸ್ಥಾಪಿಸಿರುವುದೇ ನಮಗೆಲ್ಲಾ ಹೆಮ್ಮೆ ಎಂದು ತಿಳಿಸುತ್ತಾ, ಎಲ್ಲರೂ ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಅವರು ಭೋದಿಸಿದರು, ವಿದ್ಯಾರ್ಥಿಗಳೆಲ್ಲರೂ ಪ್ರತಿಜ್ಞೆಯನ್ನು ಕೈಗೊಂಡರು,
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಕೆ.ಎರ್ರಿಸ್ವಾಮಿ, ವಿಜಯಕುಮಾರ್, ಈರಣ್ಣ, ಸ್ನೇಹಲತಾ,ಶಶಿಕಲಾ,ಸಾವಿತ್ರಿ,ಜಭಿವುಲ್ಲಾ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here