ಸಂಡೂರು:ಅ:01:-ನೂಲಿ ಚಂದಯ್ಯನವರ ಜಯಂತಿ ಆಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲು ತಿರ್ಮಾನಿಸಿದ್ದರಿಂದ ಕರ್ನಾಟಕ ಕುಳುವ ಮಹಾ (ಕೊರಚ, ಕೊರಮ, ಕೊರಚ ಸಮುದಾಯಗಳ ಒಕ್ಕೂಟ) ಸಂಘದ ಅಧ್ಯಕ್ಷ ಕೆ.ರಮೇಶ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಪಟ್ಟಣದ ವಿಜಯ ಸರ್ಕಲ್ ಬಳಿ ನೂಲಿ ಚಂದಯ್ಯನವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸೋಮವಾರ ಮಾತನಾಡಿದರು.
12ನೇ ಶತಮಾನದ ಸರ್ವಶ್ರೇಷ್ಟ ವಚನಕಾರರಾದ ನೂಲಿ ಚಂದಯ್ಯನವರ ಜಯಂತಿ ಆಚರಣೆಗೆ ಪ್ರತ್ಯಕ್ಷ ಪರೋಕ್ಷವಾಗಿ ಕಾರಣರಾದವರಿಗೆಲ್ಲ ಅಭಿನಂದನೆ ಸಲ್ಲಿಸಿದರು.
ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಪರಿಸರ ಸಂಘದ ಅಧ್ಯಕ್ಷ ಸತೀಶ್, ಕುಳುವ ಸಂಘದ ಗೌರವ ಸಲಹೆಗಾರರಾದ ದೊಡ್ಡ ಮಾರೆಪ್ಪ, ಹುನುಮಂತಪ್ಪ, ರಾಮಣ್, ಪ್ರ.ಕಾರ್ಯದರ್ಶಿ ಶೇಖಪ್ಪ, ಉಪಾಧ್ಯಕ್ಷರಾಗಿ ಕೆ.ರಾಮಾಂಜನೇಯ, ಪಂಪಾಪತಿ, ಖಜಾಂಚಿಯಾಗಿ ಹುಲುಗಪ್ಪ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಈರಣ, ಕೆ.ಪರುಶಪ್ಪ, ಕೆ.ಜಂಭಯ್ಯ, ಕೊಮಾರೆಪ್ಪ, ಗಾಳೆಪ್ಪ, ರಮೇಶ್, ಆಗರಾಜ, ವಿರೇಶಿ, ತಮ್ಮಯ್ಯ, ಸುರೇಶ, ಟಾಂಕೇಶಿ ಇತರರಿದ್ದರು.