ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಆಶಾಭಿ ಅವರು ಚಾಲನೆ ನೀಡಿದರು,
ಹಾಗೆ ಅವರೆ ಲಸಿಕೆ ಹಾಕಿಸಿ ಕೊಂಡು ಕಾರ್ಯಕ್ರಮದ ಉದ್ಘಾಟನಾ ನುಡಿಗಳನ್ನು ಹೇಳುತ್ತಾ ಲಸಿಕೆ ಬಗ್ಗೆ ಸಂದೇಹ ಪಡುವುದು ಒಳಿತಲ್ಲ ಈ ಸುತ್ತಿನಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಅವಕಾಶ ಕಲ್ಪಿಸಲಾಗಿದೆ ಆದ್ದರಿಂದ ಎಲ್ಲರೂ ಲಸಿಕೆ ಪಡೆದು ಕೋವಿಡ್-19 ವಿರುದ್ದ ನಿರೋಧಕ ಶಕ್ತಿಯನ್ನು ಬೆಳಸಿಕೊಳ್ಳ ಬೇಕು ಎಂದು ನುಡಿದರು,
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ರಾಮಾಂಜನಿ, N V ಸುರೇಶ್,B ವೀರಭದ್ರ, ಓಬಳೇಶ್, ಶಬ್ಬಿರ್ ಭಾಷ, ಡಾ.ಸುಮಿತ್ರ, ಭಾಗ್ಯಲಕ್ಷ್ಮಿ, ಉಮಾ,ನಾಗರತ್ನ,ರಿಚರ್ಡ್, ಆಶಾ ಕಾರ್ಯಕರ್ತೆಯರಾದ ವಿಜಯಶಾಂತಿ,ವೆಂಕಟಲಕ್ಷ್ಮಿ, ಹುಲಿಗೆಮ್ಮ,ಆಶಾ,ಕಾವೇರಿ,ಪದ್ಮಾ ಇತರರು ಇದ್ದರು