ಉದ್ಯಾನವನದಲ್ಲಿ ಅಳವಡಿಸಲಾಗಿರುವ ಓಪನ್ ಜಿಮ್ ಉದ್ಘಾಟಿಸಿದ ಶಾಸಕ ಸೋಮಶೇಖರ್ ರೆಡ್ಡಿ

0
70

ಬಳ್ಳಾರಿ, ಏ.06 :ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯ ರಾಘವೇಂದ್ರ ದೇವಾಲಯದ ಬಳಿಯ ಹಾಗೂ ಗಣೇಶ ಕಾಲೋನಿಯಲ್ಲಿರುವ ಉದ್ಯಾನವನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಒಂದು ಕಾಮಗಾರಿಗೆ ಅಂದಾಜು ಮೊತ್ತ 16.54 ಲಕ್ಷ ರೂಪಾಯಿಯಂತೆ ಎರಡು ಕಾಮಗಾರಿಗಳಿಗೆ ಒಟ್ಟು 33.08 ಲಕ್ಷ ರೂಪಾಯಿ ವೆಚ್ಚದ ನೂತನ ಓಪನ್ ಜಿಮ್ ಸಲಕರಣೆಗಳನ್ನು ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಹಾಗೂ ಬುಡಾ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರು ಮಂಗಳವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಬಕೊ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ವೀರಶೇಖರ ರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಅಶೋಕ್, ಶ್ರವಣಕುಮಾರ್ ರೆಡ್ಡಿ, ಪಾಲಣ್ಣ, ಮಂಜುನಾಥ ಹಾಗೂ ಗುತ್ತಿಗೆದಾರರಾದ ಮಧು ಮತ್ತು ಇತರ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here