ಹೊಸಪೇಟೆ:ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮ

0
94

ಹೊಸಪೇಟೆ(ವಿಜಯನಗರ) : ಹೊಸಪೇಟೆಯ ಅಗ್ನಿ ಶಾಮಕ ಠಾಣೆಯ ವತಿಯಿಂದ ಏ.14ರಿಂದ 20ರವರೆಗೆ ಅಗ್ನಿ ಶಾಮಕ ಸೇವಾ ಸಪ್ತಾಹ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಧ್ಯೇಯ ವಾಕ್ಯ “ಅಗ್ನಿ ಸುರಕ್ಷತಾ ಉಪಕರಣಗಳ ನಿರ್ವಹಣೆ ಅಗ್ನಿ ಅವಘಡಗಳನ್ನು ತಗ್ಗಿಸುವ ಪ್ರಮುಖ ಸಾಧನಗಳು ”(maintenance of fire safety equipment is key to mitigate fire hazards) ಆಗಿದ್ದು, ಬೆಂಕಿಯಿಂದಾಗುವ ಅಪಘಾತಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅಗ್ನಿ ಶಾಮಕ ಠಾಣಾಧಿಕಾರಿಯಾದ ಕೆ.ಎಮ್. ಕೃಷ್ಣ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗ್ನಿ ಶಾಮಕ ಸೇವಾ ಸಪ್ತಾಹ ದಿನಾಚರಣೆಯ ಅಂಗವಾಗಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ, ಕಾಲೇಜು, ಬಹುಮಹಡಿ ಕಟ್ಟಡ, ಕಚೇರಿಗಳಲ್ಲಿ ಉಪನ್ಯಾಸ ಮತ್ತು ಅಣಕು ಪ್ರದರ್ಶನ ನೀಡಿ ಬೆಂಕಿಯಿಂದಾಗುವ ಅಪಘಾತಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬೆಂಕಿ ಅಪಘಾತವಾದಾಗ ಹೊಸಪೇಟೆ ಅಗ್ನಿಶಾಮಕ ಠಾಣೆ ದೂರವಾಣಿ ಸಂಖ್ಯೆ : 08394-230555 ಅಥವಾ 08394-226101 ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here